Select Your Language

Notifications

webdunia
webdunia
webdunia
webdunia

ಆತ್ಮಹತ್ಯೆ ಕೃತ್ಯಕ್ಕೆ ಕೈಹಾಕಬೇಡಿ, ರಕ್ಷಣೆಗೆ ನಾವಿದ್ದೇವೆ: ಸಚಿವ ಆಂಜನೇಯ

ಆತ್ಮಹತ್ಯೆ ಕೃತ್ಯಕ್ಕೆ ಕೈಹಾಕಬೇಡಿ, ರಕ್ಷಣೆಗೆ ನಾವಿದ್ದೇವೆ: ಸಚಿವ ಆಂಜನೇಯ
ಬಿಜಾಪುರ , ಬುಧವಾರ, 20 ಆಗಸ್ಟ್ 2014 (17:37 IST)
ಬಿಜಾಪುರದ ಅಲಮೇಲ ಪಟ್ಟಣದ ವಸತಿ ಶಾಲೆಯಲ್ಲಿ  ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿರುವ ಸಂಗತಿ ನೋಡಿ ತಮಗೆ ತೀವ್ರ ನೋವಾಗಿದೆ. ಹಾಸ್ಟೆಲ್‌ನಲ್ಲಿರುವ ಮಕ್ಕಳು ನಮ್ಮ ಮಕ್ಕಳಿದ್ದಂತೆ, ನಿಮ್ಮ ರಕ್ಷಣೆಗೆ ನಾವಿದ್ದೇವೆ, ಆತ್ಮಹತ್ಯೆ ಮಾಡಿಕೊಳ್ಳುವಂತ ಕೃತ್ಯಕ್ಕೆ ಕೈಹಾಕಬೇಡಿ ಎಂದು ವಸತಿ ಕಲ್ಯಾಣ ಸಚಿವ ಆಂಜನೇಯ ಹೇಳಿಕೆ ನೀಡಿದ್ದಾರೆ.

ಹಾಸ್ಟೆಲ್‌ನಲ್ಲಿರುವ ಮಕ್ಕಳಿಗೆ ಅಭದ್ರತೆ ಕಾಡಬಾರದು. ಹೆಣ್ಣು ಮಕ್ಕಳ ಶಾಲೆಯಲ್ಲಿ ಸಿಸಿಟಿವಿ ಅಳವಡಿಕೆಗೆ ನಿರ್ಧಾರ ಮಾಡಿರುವುದಾಗಿ ಅವರು ತಿಳಿಸಿದರು. ನಿಮ್ಮೊಟ್ಟಿಗೆ ನಾವಿದ್ದೇವೆ, ಮಕ್ಕಳೇ ಆತಂಕ ಪಡಬೇಡಿ, ಹೆಣ್ಣು ಮಕ್ಕಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಂಜನೇಯ ಹೇಳಿದರು. 
 

Share this Story:

Follow Webdunia kannada