Select Your Language

Notifications

webdunia
webdunia
webdunia
webdunia

ಕತ್ತೆಗಳು ಕನಸುಕಾಣಬಹುದು: ಉಮೇಶ್ ಕತ್ತಿ ವಿರುದ್ಧ ಪುಟ್ಟಪ್ಪ ವಾಗ್ದಾಳಿ

ಕತ್ತೆಗಳು ಕನಸುಕಾಣಬಹುದು: ಉಮೇಶ್ ಕತ್ತಿ ವಿರುದ್ಧ ಪುಟ್ಟಪ್ಪ ವಾಗ್ದಾಳಿ
ಬೆಳಗಾವಿ , ಸೋಮವಾರ, 15 ಸೆಪ್ಟಂಬರ್ 2014 (18:09 IST)
ಕತ್ತೆಗಳು ಕನಸು ಕಾಣಬಹುದು ಎನ್ನುವುದಕ್ಕೆ ಉಮೇಶ್ ಕತ್ತಿ ಸಾಕ್ಷಿಯಾಗಿದ್ದಾರೆ.  ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಾ ಆ ಹೇಳಿಕೆ ನೀಡಿದ್ದಾರೆ.ಉಮೇಶ್ ಕತ್ತಿ ತಲೆ ಖಾಲಿಯಾಗಿದೆ. ಕೇವಲ ಅಧಿಕಾರದ ಹಂಬಲ ತುಂಬಿಕೊಂಡಿದ್ದಾರೆ.

ಉಮೇಶ್ ಕತ್ತಿ ಹೇಳಿಕೆ ಮೂರ್ಖತನದ್ದು. ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಈಡಾಗಿರುವುದು ಸತ್ಯ. ಆದರೆ ರಾಜ್ಯ ಇಬ್ಭಾಗದ ಮಾತನಾಡುವುದು ಮೂರ್ಖತನ ಎಂದು ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.  ಪ್ರತ್ಯೇಕ ರಾಜ್ಯದ ಕೂಗು ಬೇಡ.

ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ರಾಜ್ಯವನ್ನು ಇಬ್ಭಾಗಿಸಿ ಉತ್ತರಕರ್ನಾಟಕ ರಾಜ್ಯಕ್ಕೆ ಬೆಳಗಾವಿಯನ್ನು ರಾಜಧಾನಿಯಾಗಿ ಮಾಡಬೇಕು. ಉತ್ತರಕರ್ನಾಟಕ ಸತತವಾಗಿ ನಿರ್ಲಕ್ಷಕ್ಕೆ ಒಳಪಟ್ಟಿರುವುದರಿಂದ ಅಭಿವೃದ್ಧಿಯನ್ನೇ ಕಂಡಿಲ್ಲ ಎಂದು ಉಮೇಶ್ ಕತ್ತಿ ಹೇಳಿದ್ದರು. 

Share this Story:

Follow Webdunia kannada