Select Your Language

Notifications

webdunia
webdunia
webdunia
webdunia

ರೇಪ್ ಬಿಟ್ರೆ ಬೇರೆ ಯಾವುದೇ ವಿಚಾರ ನಿಮಗಿಲ್ವೇ: ಮಾಧ್ಯಮದ ವಿರುದ್ಧ ಸಿಎಂ ಗರಂ

ರೇಪ್ ಬಿಟ್ರೆ ಬೇರೆ ಯಾವುದೇ ವಿಚಾರ ನಿಮಗಿಲ್ವೇ: ಮಾಧ್ಯಮದ ವಿರುದ್ಧ ಸಿಎಂ ಗರಂ
ಬೆಂಗಳೂರು , ಮಂಗಳವಾರ, 22 ಜುಲೈ 2014 (14:57 IST)
ಬೆಂಗಳೂರಿನ ಅತ್ಯಾಚಾರ ಪ್ರಕರಣಗಳನ್ನು ಕುರಿತು ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದ ಘಟನೆ ನಡೆದಿದೆ. ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಸಿಎಂ ಸಿಡಿಮಿಡಿಗೊಂಡು, ರೇಪ್ ಬಿಟ್ರೆ ಬೇರೆ ಯಾವುದೇ ವಿಚಾರ ನಿಮಗಿಲ್ವೇ ಎಂದು ವಿಧಾನಸೌಧದಲ್ಲಿ ಅವರು ಪ್ರಶ್ನಿಸಿದರು.

ಮೈಸೂರಿನಲ್ಲಿ ನಡೆದ ಅತ್ಯಾಚಾರದ ಬಗ್ಗೆ ಸಿಎಂ ಅವರಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಅವುಗಳಿಗೆ ಪ್ರತಿಕ್ರಿಯಿಸಲು ನಕಾರ ಸೂಚಿಸಿದ ಸಿಎಂ ಮಾಧ್ಯಮಗಳ ವಿರುದ್ಧ ಸಿಡಿಮಿಡಿಗೊಂಡರು. ಮೈಸೂರು ರೇಪ್ ಕೇಸ್ ಬಗ್ಗೆ ತಮಗೇನೂ ಗೊತ್ತಿಲ್ಲ. ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ಗೂಂಡಾ ಕಾಯ್ದೆ ಜಾರಿಗೆ ತರುವುದಾಗಿ ಹೇಳಿದರು. ಬಿಜೆಪಿ ರೇಪ್ ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ ಎಂದು ಖಾರವಾಗಿ ಹೇಳಿದರು. 

ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ  ಆರೋಗ್ಯ ಸಚಿವ ಯು.ಟಿ.ಖಾದರ್  ಮೇಲ್ನೋಟಕ್ಕೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ವರದಿ ನೀಡಲು ಮೈಸೂರು ಡಿಎಚ್‌ಒಗೆ ಹೇಳಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ನುಡಿದರು. 

Share this Story:

Follow Webdunia kannada