ಇನ್ ವೆಸ್ಟ್ ಕರ್ನಾಟಕ 2016ರ ಅಂಗವಾಗಿ ಸಿಎಂ ಸಿದ್ದರಾಮಯ್ಯ ವಿವಿಧ ಸ್ಟಾಲ್ಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ನಿನ್ನೆ ಆರೋಗ್ಯ ಸ್ಟಾಲ್ ಉದ್ಘಾಟನೆಗೆ ಆರೋಗ್ಯ ಸಚಿವ ಖಾದರ್ ಜತೆ ತೆರಳಿದ್ದ ಸಿದ್ದರಾಮಯ್ಯ ಸ್ಟಾಲ್ಗೆ ಇನ್ನೂ ಸುಣ್ಣ, ಬಣ್ಣ ಬಳಿಯುತ್ತಿರುವುದನ್ನು ನೋಡಿ ಉದ್ಘಾಟನೆ ಮಾಡದೇ ಖಾದರ್ ಅವರ ಕೈಹಿಡಿದು ಎಳೆದುಕೊಂಡು ವಾಪಸ್ ಬಂದಿದ್ದರು.
ಇಂದು ಸಿದ್ದರಾಮಯ್ಯ ವೈನ್ಸ್ಟಾಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವ ವೈನ್ ಚೆನ್ನಾಗಿರತ್ತೆ ಅಂತ ಪಕ್ಕದಲ್ಲಿದ್ದ ಐಎಎಸ್ ಅಧಿಕಾರಿ ಲತಾ ಕೃಷ್ಣರಾವ್ ಅವರನ್ನು ಕೇಳಿದಾಗ ರೆಡ್ ವೈನ್ ಚೆನ್ನಾಗಿರತ್ತೆ ಎಂದು ಲತಾ ಹೇಳಿದರು.
ನಿಮಗೇಗೆ ಗೊತ್ತು ನೀವು ಕುಡಿಯುತ್ತೀರಾ ಎಂದು ಸಿಎಂ ಕೇಳಿದಾಗ ಲತಾ ತಬ್ಬಿಬ್ಬಾದರು. ಅಲ್ಲಿ ಸುತ್ತಮುತ್ತಲಿದ್ದವರಿಗೆ ನಗು ತಡೆಯಲಾಗಲಿಲ್ಲ. ಇನ್ನು ಕಾಫಿ ಸ್ಟಾಲ್ಗೆ ಹೋಗಿ ಕಾಫಿಯ ರುಚಿಯನ್ನು ಸಿದ್ದರಾಮಯ್ಯ ಸವಿದರು.