ನೀವು ರಸ್ತೆ ಅಭಿವೃದ್ಧಿ ಮಾಡುವುದಾದರೆ ಮಾಡಿ: ಕಿರಣ್ ಮಜುಂದಾರ್‌ಗೆ ಡಿಕೆ ಶಿವಕುಮಾರ್ ಕೌಂಟರ್‌

Sampriya
ಶನಿವಾರ, 18 ಅಕ್ಟೋಬರ್ 2025 (17:16 IST)
Photo Credit X
ಬೆಂಗಳೂರು: ನಗರದ ರಸ್ತೆ ಮೂಲಸೌಕರ್ಯಗಳ ಕುರಿತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರ ಟೀಕೆಗೆ ಮತ್ತೇ ಪ್ರತಿಕ್ರಿಯಿಸಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸದ್ಯದ ಪರಿಸ್ಥಿತಿಯಲ್ಲಿರುವ ರಸ್ತೆಯನ್ನು ಆಕೆ ಸರಿ ಪಡಿಸುವುದಾದರೆ ಮಾಡಲಿ. ಆಕೆ ಬಂದು ಕೇಳಲಿ, ನಾವು ಆಕೆಗೆ ರಸ್ತೆಯನ್ನು ನೀಡುತ್ತೇವೆ ಎಂದರು. 

ಇಂದು ಕೆಆರ್‌ ಪುರಂನಲ್ಲಿ ‘ಬೆಂಗಳೂರು ನಾಡಿಗೆ ನಡಿಗೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್‌ ಅವರು, ‘ರಾಜ್ಯ ಸರ್ಕಾರ ಅನುದಾನ ಮೀಸಲಿಟ್ಟಿದ್ದು, ಇಲ್ಲಿನ ಪ್ರದೇಶದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಹೆಚ್ಚು ತೆರಿಗೆ ಪಾವತಿಸಿದೆ. ಬೆಂಗಳೂರು ನಗರದಿಂದ 6000 ಕೋಟಿ ತೆರಿಗೆ ಬರುತ್ತಿದ್ದು, ಈ ಪೈಕಿ ಪಾಲಿಕೆಗೆ 1600 ಕೋಟಿ ಬರುತ್ತಿದೆ, ಈ ಭಾಗದ ಜನರು ಹೆಚ್ಚು ತೆರಿಗೆ ಕಟ್ಟಿದ್ದಾರೆ, ಈ ಭಾಗದ ಅಭಿವೃದ್ಧಿಗೆ ಹಣ ಮಂಜೂರು ಮಾಡಿದ್ದೇವೆ, ಬೆಂಗಳೂರಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲು ಅನುಮತಿ ನೀಡಿದ್ದೇವೆ ಎಂದು ಶಿವಕುಮಾರ್ ಹೇಳಿದರು. 

ನನ್ನನ್ನು ಭೇಟಿಯಾಗದೇ ಇರುವವರು 1533 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ತಿಳಿಸಿ, ಸಮಸ್ಯೆ ಹೇಳಿಕೊಂಡವರಿಗೆ ಕರೆ ಬರಲಿದ್ದು, ಪರಿಶೀಲನೆ ನಡೆಸುತ್ತೇವೆ, ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ಇಂದು ಸಂಜೆಯೊಳಗೆ ಅಮಾನತು ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೆಲ್ಲ ದಲಿತ ಸಚಿವರ ಹೆಸರು ಕೆಡಿಸಲು ಪ್ರಯತ್ನ: ಡಿಕೆ ಶಿವಕುಮಾರ್

ವಲಸೆ ಬಂದ ಹಕ್ಕಿಗಳಿಗೆ ಹೀಗಾಗುವುದಾ, ಅಸ್ಸಾಂ ಜಿಲ್ಲೆಯಲ್ಲಿ ನಿಜವಾಗ್ಲೂ ಆಗಿದ್ದೇನು

ಹೆಂಡ್ತಿ ಜತೆ ರೋಮ್ಯಾಂಟಿಕ್ ರೀಲ್ ಮಾಡಲು ಹೋಗಿ ಸಂಕಷ್ಟ ತಂದುಕೊಂಡ ಪೊಲೀಸ್ ಅಧಿಕಾರಿ, ಆಗಿದ್ದೇನು ಗೊತ್ತಾ

ಆಸಕ್ತಿ ತೋರಿರುವ, ತೋರದವರ ಬಗ್ಗೆ ಎಐಸಿಸಿಗೆ ಲಿಖಿತ ಮಾಹಿತಿ: ಡಿಕೆ ಶಿವಕುಮಾರ್, Video

ನಿಪಾ ವೈರಸ್ ಹರಡುವಿಕೆ: ಏಷ್ಯಾದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ

ಮುಂದಿನ ಸುದ್ದಿ
Show comments