Webdunia - Bharat's app for daily news and videos

Install App

ಬೆಂಗಳೂರಿನವರಿಗೆ ಕುರಿ, ಕೋಳಿ ಎಂದೆಲ್ಲಾ ಪ್ರಶ್ನೆ ಕೇಳಬೇಡಿ: ಡಿಕೆ ಶಿವಕುಮಾರ್ ಖಡಕ್ ಸೂಚನೆ

Krishnaveni K
ಭಾನುವಾರ, 5 ಅಕ್ಟೋಬರ್ 2025 (13:46 IST)
ಬೆಂಗಳೂರು: ಜಾತಿಗಣತಿಗೆಂದು ಹೋಗುವ ಸಮೀಕ್ಷಕರು ಬೆಂಗಳೂರಿಗರಿಗೆ ಕುರಿ ಎಷ್ಟಿದೆ, ಕೋಳಿ ಎಷ್ಟಿದೆ ಎಂಬಿತ್ಯಾದಿ ಪ್ರಶ್ನೆಗಳನ್ನೆಲ್ಲಾ ಕೇಳಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ ಕೊಟ್ಟಿದ್ದಾರೆ.

ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಿದ್ದರು. ಈ ವೇಳೆ ಅವರಿಗೆ ಈ ರೀತಿಯ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಅವರು ಅಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಚಿನ್ನ ಎಷ್ಟಿದೆ ಎಂದು ಕೇಳಿದಾಗ ಅದೆಲ್ಲಾ ಪರ್ಸನಲ್ ಎಂದು ಉತ್ತರಿಸಲು ನಿರಾಕರಿಸಿದ್ದರು.

ಬಿಜೆಪಿ ಕೂಡಾ ಇದೇ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅನಗತ್ಯ ಪ್ರಶ್ನೆಗಳನ್ನು ಕೇಳಿ ಸಮೀಕ್ಷೆ ಗೊಂದಲದ ಗೂಡಾಗಿದೆ ಎಂದು ಟೀಕಿಸುತ್ತಿದೆ. ಇದರ ಬೆನ್ನಲ್ಲೇ ಡಿಕೆಶಿ ಅನಗತ್ಯ ಪ್ರಶ್ನೆ ಕೇಳದಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರಿಗರಿಗೆ ಕುರಿ ಎಷ್ಟಿದೆ, ಕೋಳಿ ಎಷ್ಟಿದೆ ಎಂಬೆಲ್ಲಾ ಪ್ರಶ್ನೆಗಳು ಅನಗತ್ಯ. ಅಂತಹ ಪ್ರಶ್ನೆಗಳನ್ನು ಕೇಳಬೇಡಿ. ಇನ್ನು, ಚಿನ್ನ ಎಷ್ಟಿದೆ, ಫ್ರಿಡ್ಜ್ ಎಷ್ಟಿದೆ, ವಾಚ್ ಎಷ್ಟಿದೆ ಎನ್ನುವುದೆಲ್ಲಾ ಅವರವರ ಪರ್ಸನಲ್. ಇಂತಹ ಪ್ರಶ್ನೆಗಳನ್ನು ಕೇಳಬೇಡಿ. ಇದಕ್ಕೆಲ್ಲಾ ಉತ್ತರ ಕೊಡಬೇಕಾದ ಅಗತ್ಯವಿಲ್ಲ. ಜಾತಿ ಸಮೀಕ್ಷೆ ಮಾಡುವುದು ಅಗತ್ಯ. ಆದರೆ ಅನಗತ್ಯ ಪ್ರಶ್ನೆಗಳನ್ನು ಕೇಳಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿರಂತರ ಮಳೆಯಾಗಿದ್ದ ಕರಾವಳಿ ಭಾಗದಲ್ಲಿ ಇಂದಿನಿಂದ ಹೇಗಿರಲಿದೆ ಗೊತ್ತಾ ಹವಾಮನ

ಪೊಲೀಸರ ಎದುರೇ ಕಲ್ಲುಗಳನ್ನು ಎಸೆದಿದ್ದಾರೆ: ಮಮತಾ ಬ್ಯಾನರ್ಜಿ ಆಕ್ರೋಶ

ಮನೆಯಲ್ಲಿಟ್ಟರೆ ಕಳ್ಳತನವಾಗುತ್ತದೆಂದು ಭೂಮಿಯಲ್ಲಿ ಹೂತಿಟ್ಟ 5ಲಕ್ಷ, ಅಗತ್ಯ ಬಿದ್ದಾಗ ತೆಗೆದು ನೋಡಿದಾಗ ರೈತ ಶಾಕ್

Video, ನೋಡನೋಡುತ್ತಿದ್ದ ಹಾಗೇ ನಿಯಂತ್ರಣ ಕಳೆದುಕೊಂಡ ಬಸ್ ಡ್ರೈವರ್‌, ಮುಂದೇನಾಯ್ತು ನೋಡಿ

ಸಚಿವ ನಾಗೇಂದ್ರ ಕಾನೂನು ಉಲ್ಲಂಘನೆ ಮಾಡಿದ್ದರೆ ಅದು ತಪ್ಪು

ಮುಂದಿನ ಸುದ್ದಿ
Show comments