Webdunia - Bharat's app for daily news and videos

Install App

ಮುಂದೊಂದು ದಿನ ಡಿಕೆ ಶಿವಕುಮಾರ್ ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ-ಜಗದೀಶ ಶೆಟ್ಟರ್ ವಾಗ್ದಾಳಿ

Webdunia
ಬುಧವಾರ, 27 ಮಾರ್ಚ್ 2019 (09:25 IST)
ಬಳ್ಳಾರಿ : ಸೊಕ್ಕಿನ ಮಾತುಗಳನ್ನಾಡುವ ಸಚಿವ ಡಿಕೆ ಶಿವಕುಮಾರ್ ಹೆಣ ಹೊರುವುದು ಖಾಯಂ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.


ಬಳ್ಳಾರಿಯ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಚಿವ ಡಿಕೆ ಶಿವಕುಮಾರ್ ಮೊದಲು ಸರಿಯಾಗಿ ಮಾತನಾಡುವುದು ಕಲಿಯಲಿ, ಸೊಕ್ಕಿನ ಮಾತುಗಳು ಬೇಡ. ಇನ್ನು ಮುಂದೆ ಅವರಿಗೆ ಹೆಣ ಹೊರುವುದು ಖಾಯಂ ಕೆಲಸವಾಗಲಿದೆ. ಮುಂದೊಂದು ದಿನ ಅವರು ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.


ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ಸಿನಲ್ಲಿ ನನ್ನ ಬಿಟ್ಟರೆ ಗತಿ ಯಾರೂ ಇಲ್ಲ ಅಂತ ದಿಮಾಕು. ಕಾಂಗ್ರೆಸ್ಸಿನಲ್ಲಿ ಪಲ್ಲಕ್ಕಿ ಹೊರುವುದಕ್ಕೂ ನಾನೇ, ಹೆಣ ಹೊರುವುದಕ್ಕೂ ನಾನೇ ಅಂತ ಬೀಗುತ್ತಾರೆ. ಆದ್ರೆ ಅವರ ಅಹಂಕಾರ, ದಿಮಾಕು, ಸೊಕ್ಕು ಬಹಳ ದಿನ ಇರಲ್ಲ. ಬಳ್ಳಾರಿಯ ಜನ ಸ್ವಾಭಿಮಾನಿಗಳಾಗಿದ್ದು ಒಂದು ಸಲ ಜನರು ಪಾಠ ಕಲಿಸಿದರೆ ಮತ್ತೆ ಕನಕಪುರದಿಂದ ಬಳ್ಳಾರಿಗೆ ಡಿಕೆಶಿ ವಾಪಸ್ ಬರಲ್ಲವೆಂದು ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments