Webdunia - Bharat's app for daily news and videos

Install App

391 ಜನರಿಗೆ ಉಚಿತ ಕನ್ನಡಕಗಳ ವಿತರಣೆ

Webdunia
ಶುಕ್ರವಾರ, 29 ಏಪ್ರಿಲ್ 2022 (19:58 IST)
ಬೆಂಗಳೂರು.ಏ.29; ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೃಷ್ಣಾನಂದ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏಪ್ರಿಲ್‌ 24 ರಂದು ಹಮ್ಮಿಕೊಂಡಿದ್ದ  ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗೆ  ಒಳಗಾಗಿದ್ದವರಿಗೆ ಇಂದು ಉಚಿತ ಕನ್ನಡಕಗಳನ್ನು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿತರಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ‌ಅವರು, ಕ್ಷೇತ್ರದ ವ್ಯಾಪ್ತಿಯ ಸರ್ವರ ಆರೋಗ್ಯ ಉತ್ತಮ ವಾಗಿರಬೇಕೆಂಬ ದೃಷ್ಟಿಯಿಂದ ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಮೇ ಎರಡನೇ ಭಾನುವಾರ ನಂದಿನಿ ಬಡಾವಣೆಯ ರಾಮಕೃಷ್ಣ ನಗರದಲ್ಲಿರುವ ದೇವಸ್ಥಾನದ ಪ್ರಾರ್ಥನಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
 
 ಆ ಭಾಗದ ಎಲ್ಲರೂ ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕಲ್ಲದೆ ಬೇರೆ ಊರುಗಳಲ್ಲಿ ಇರುವ ನಿಮ್ಮ ಬಂಧುಗಳು ಕಣ್ಣು, ಹೃದಯ, ಗರ್ಭಕೋಶ ಮೊದಲಾದ ಸಮಸ್ಯೆಗಳಿಂದ ನರಳುತ್ತಿದ್ದರೆ ಅವರಿಗೂ ಈ ವಿಚಾರ ತಿಳಿಸಿ ಅವರ ಆರೋಗ್ಯ ಕೂಡ ಸುಧಾರಿಸುವ ನಿಟ್ಟಿನಲ್ಲಿ ಮುಂದಾಗಿ ಎಂದು ಕರೆ ನೀಡಿದರು.
 
ಕಾರ್ಯಕ್ರಮದಲ್ಲಿ 391 ಜನರಿಗೆ ಉಚಿತ ಕನ್ನಡಗಳನ್ನು ಸಚಿವರು ವಿತರಿಸಿದರು. ಈ ವೇಳೆ‌ ಬಿಬಿಎಂಪಿ ಮಾಜಿ ಸದಸ್ಯ ಮಹದೇವ್, ಪುಟ್ಟರಾಜು,ಬೆಂಗಳೂರು ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಜಯರಾಮಯ್ಯ, ಡಾ.ನಾಗೇಂದ್ರ, ವೆಂಕಟೇಶ್ ಮೂರ್ತಿ,ವೆಂಕಟೇಶ್ ,ಸ್ಥಳೀಯ ಬಿಜೆಪಿ ಮುಖಂಡರು, ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Tiger viral video: ಹೆಬ್ಬಾವನ್ನೇ ತಿನ್ನಲು ಹೋದ ಹುಲಿ ಸಂಕಟ ಹೇಳತೀರದು

CET exam Brahmin student ಜನಿವಾರ ತೆಗೆಸಿದ ಘಟನೆ: ಕ್ಷಮೆ, ಅಧಿಕಾರಿ ಸಸ್ಪೆಂಡ್ ಓಕೆ, ವಿದ್ಯಾರ್ಥಿಯ ಭವಿಷ್ಯದ ಕತೆಯೇನು

Karnataka caste census: ಜಾತಿಗಣತಿ ವರದಿಯಿಂದ ಹೀಗಾಗಿದೆ ಸಾರ್ ಎಂದು ರಾಹುಲ್ ಗಾಂಧಿಗೆ ವರದಿ ಒಪ್ಪಿಸಲು ತಯಾರಿ

Gold price today: ಚಿನ್ನದ ಬೆಲೆ ಇಂದು ಎಷ್ಟಾಗಿದೆ ನೋಡಿ

Karnataka caste census: ದೇಶದ ಪ್ರಮುಖ ನಾಯಕರ ಜಾತಿ, ಸಮುದಾಯ ಯಾವುದು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments