Select Your Language

Notifications

webdunia
webdunia
webdunia
webdunia

ಹೆಬ್ಬಾಳ ಅಭ್ಯರ್ಥಿಗೆ "ಕೈ'' ಕೊಟ್ರೆ ಶಿಸ್ತು ಕ್ರಮ : ಪರಮೇಶ್ವರ್ ಎಚ್ಚರಿಕೆ

ಹೆಬ್ಬಾಳ ಅಭ್ಯರ್ಥಿಗೆ
ಬೆಂಗಳೂರು , ಶುಕ್ರವಾರ, 29 ಜನವರಿ 2016 (13:06 IST)
ಹೆಬ್ಬಾಳದಲ್ಲಿ ಪಕ್ಷವಿರೋಧಿ ಚಟುವಟಿಕೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಡಾ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ  ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ, ಜೆಡಿಎಸ್ ಮಾತ್ರ ಎದುರಾಳಿಗಳಲ್ಲ, ಪಕ್ಷದಲ್ಲೂ ನಮ್ಮ ಎದುರಾಳಿಗಳಿದ್ದು, ಅಭಿವೃದ್ಧಿ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

 ಸಭೆಯಲ್ಲಿ ಡಿ.ಕೆ. ಶಿವಕುಮಾರ್, ರೋಷನ್ ಬೇಗ್, ರಾಮಲಿಂಗಾ ರೆಡ್ಡಿ ಮುಂತಾದವರು ಹಾಜರಿದ್ದರು. ಕಡೇಗಳಿಗೆಯಲ್ಲಿ ಜಾಫರ್‌ಷರೀಫ್ ಅವರ ಮೊಮ್ಮಗ ರೆಹ್ಮಾನ್ ಖಾನ್ ಅವರಿಗೆ ಟಿಕೆಟ್ ನೀಡಲಾಗಿತ್ತು.

ಇದಕ್ಕೆ ಮೊದಲು ಭೈರತಿ ಸುರೇಶ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿ ಕಡೆಗೆ ಬದಲಿಸಲಾಗಿತ್ತು. ಟಿಕೆಟ್ ಹಂಚಿಕೆ ಗೊಂದಲದಿಂದ ಆಂತರಿಕ ಬೇಗುದಿ ಹೆಚ್ಚಿರುವ ಹಿನ್ನೆಲೆಯಲ್ಲಿ ಪರಮೇಶ್ವರ್ ಮೇಲಿನಂತೆ ಎಚ್ಚರಿಕೆ ನೀಡಿದ್ದಾರೆ. 

Share this Story:

Follow Webdunia kannada