ಹುಬ್ಬಳ್ಳಿಯಲ್ಲಿ ಇದೆಂಥಾ ವಿಚಿತ್ರ ಆಚರಣೆ...?

Webdunia
ಭಾನುವಾರ, 1 ಅಕ್ಟೋಬರ್ 2017 (13:34 IST)
ಹುಬ್ಬಳ್ಳಿ: ಬೆಂಕಿಯಲ್ಲಿ ಒಂದು ವರ್ಷದ ಮಗುವನ್ನು ಹಾಕಿ ತಗೆಯುವ ವಿಚಿತ್ರ ಸಂಪ್ರದಾಯ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮಕ್ಕಳಿಗೆ ರೋಗ ರುಜಿನಗಳು ಬಾರದಿರಲಿ ಎಂಬ ಉದ್ದೇಶದಿಂದ ಈ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.  ಬೇರೆ ಬೇರೆ ಗ್ರಾಮಗಳಿಂದ ಬಂದವರು ಬೇಡಿಕೊಂಡ ಹರಕೆ ತೀರಿಸಲು ಈ ರೀತಿ ಮಕ್ಕಳನ್ನು ಬೆಂಕಿ ಮೇಲೆ ಮಲಗಿಸುತ್ತಾರೆ. 

ಕೆಂಡದ ಮೇಲೆ ಬಾಳೆ ಎಲೆ ಇಟ್ಟು ಮಕ್ಕಳನ್ನು ಮಲಗಿಸುತ್ತಾರೆ. ಎರಡು ನಿಮಿಷಗಳ ನಂತರ ಮಕ್ಕಳನ್ನು ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಮಕ್ಕಳಿಗೆ ಯಾವುದೇ ದುಷ್ಟ ಶಕ್ತಿಗಳ ಕಾಟ ತಾಗುವುದಿಲ್ಲ ಎಂಬ ನಂಬಿಕೆ ಇವರಲ್ಲಿದೆ‌.‌ ಸಾಕಷ್ಟು ಜನ ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಬೆಂಕಿ ಮೇಲೆ ಮಲಗಿಸುವ ದೃಶ್ಯ ಭಯಾನಕವಾಗಿತ್ತು.

ಇತ್ತ ಸಂಶಿ ಗ್ರಾಮದಲ್ಲಿ ಮೈನವಿರೇಳಿಸುವಂತೆ ಭಕ್ತರು ಭಕ್ತಿ ಸಮರ್ಪಣೆ ಮಾಡಿದ್ದಾರೆ. ರಾಜಾಬಕ್ಷಾ ಮಸುತಿ ಆವರಣದಲ್ಲಿ ವಿವಿಧ ಶಸ್ತ್ರಗಳನ್ನು ದೇಹಕ್ಕೆ ಸಿಕ್ಕಿಸಿಕೊಂಡು ಬೆಂಕಿಯೊಳಗೆ ಓಡಾಡುವ ದೃಶ್ಯ ಮೈ ಜುಮ್ ಎನಿಸುವಂತಿತ್ತು. ಕರಿಬಸಪ್ಪ ಜಾಡರ ಎನ್ನುವವರು ಮೈತುಂಬ ಶಸ್ತ್ರ ಚುಚ್ಚಿಕೊಂಡು, ಅದಕ್ಕೆ ನಿಂಬೆಹಣ್ಣನು ಚುಚ್ಚಿ ಗ್ರಾಮದಲ್ಲಿ ಸುತ್ತಾಡುವ ಮೂಲಕ  ತಮ್ಮ ಭಕ್ತಿ  ಸಲ್ಲಿಸಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಸರ್ಕಾರಿ ನೌಕರರ ಸಾವಿಗೆ ಸಿದ್ದರಾಮಯ್ಯ ರಾಜೀನಾಮೆಯೇ ಪ್ರಾಯಶ್ಚಿತ: ಸಿಟಿ ರವಿ

ಗೃಹಲಕ್ಷ್ಮಿ ಹಣ ಬಂದಿಲ್ಲ ಸಾರ್ ಎಂದು ನಾಟಕವಾಡಿದ ಮಹಿಳೆ: ಡಿಕೆ ಶಿವಕುಮಾರ್ ಮಾಡಿದ್ದೇನು

ಮುಂದಿನ ಸುದ್ದಿ
Show comments