Webdunia - Bharat's app for daily news and videos

Install App

ಗೆಲುವಿನ ಉತ್ಸಾಹದಲ್ಲಿ ಮೈ ಮರೆತು ಕಾಂಗ್ರೆಸ್ ಮಾಡಿದ ಆ ತಪ್ಪು ಏನು ಗೊತ್ತಾ?!

Webdunia
ಶನಿವಾರ, 24 ಮಾರ್ಚ್ 2018 (09:08 IST)
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಿವೆ. ಆದರೆ ಚುನಾವಣೆಗೆ ಮೊದಲೇ ಕಾಂಗ್ರೆಸ್ ತನ್ನದೇ ಗೆಲುವು ಎಂಬ ಉತ್ಸಾಹದಲ್ಲಿ ಮೈ ಮರೆತರಾ?

ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆ ಕಡಿಮೆ. ಹಾಗಾದ ಪಕ್ಷದಲ್ಲಿ ಕಾಂಗ್ರೆಸ್ ಜೆಡಿಎಸ್ ಜತೆ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸಬಹುದು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ಕೊಡಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು.

ಹಲವು ಸಮೀಕ್ಷೆಗಳು, ಜ್ಯೋತಿಷಿಗಳು, ರಾಜಕೀಯ ತಜ್ಞರೂ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಥವಾ ಕುಮಾರಸ್ವಾಮಿ ನಿರ್ಣಾಯಕರು ಎಂದೇ ಭವಿಷ್ಯ ನುಡಿದಿದ್ದರು. ಆದರೆ ರಾಹುಲ್ ಗಾಂಧಿ ಕರಾವಳಿ ಪ್ರವಾಸ ಮಾಡಿದಾಗ ನೀಡಿದ ಹೇಳಿಕೆಯೊಂದು ಜೆಡಿಎಸ್ ನಲ್ಲಿ ಅಸಮಾಧನದ ಹೊಗೆ ಸೃಷ್ಟಿಸಿದೆ.

ಜೆಡಿಎಸ್ ನ್ನು  ಟೀಂ ಬಿ ಎಂದಿದ್ದ ರಾಹುಲ್,  ಆ ಪಕ್ಷವನ್ನು ಕೆಣಕಿದ್ದರು. ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ-ಮಂಜೇಗೌಡ ನಡುವೆ ನಡೆದ ಫೋನ್ ಸಂಭಾಷಣೆಯಲ್ಲಿ ಎಚ್ ಡಿ ರೇವಣ್ಣರನ್ನು ಸೋಲಿಸುವ ಮಾತನಾಡಿದ್ದರು. ಆ ಘಟನೆಯಿಂದ ಅಸಮಾಧಾನಗೊಂಡಿದ್ದ ಜೆಡಿಎಸ್, ಇದೀಗ ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿಯ ಸೋಲಿನಿಂದ ಮತ್ತಷ್ಟು ಕೆರಳಿದೆ. ಮತದಾನ ಮಾಡುವಾಗ ಕಾಂಗ್ರೆಸ್ ಪರವಾಗಿ ಚುನಾವಣಾಧಿಕಾರಿಗಳು ನಡೆದುಕೊಂಡರು ಎಂಬುದು ಜೆಡಿಎಸ್ ಆರೋಪ.

ರಾಜ್ಯ ಸಭೆ ಸೋಲಿನಿಂದ ಮತ್ತಷ್ಟು ಕೆರಳಿರುವ ಕುಮಾರಸ್ವಾಮಿ, ನಾವು ಬಿಜೆಪಿ ಜತೆ ಸೇರಿಕೊಂಡರೆ ಕಾಂಗ್ರೆಸ್ ಕತೆಯೇ ಬೇರೆಯಾಗುತ್ತೆ ಎಂದಿದ್ದಾರೆ. ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿಯೂ ಹೆಚ್ಚವರಿ ಮತಗಳನ್ನು ಕಾಂಗ್ರೆಸ್ ಬಳಿ ಕೇಳಿದ್ದ ಜೆಡಿಎಸ್ ಗೆ ಮುಖಭಂಗವಾಗಿತ್ತು. ಈ ಸೇಡಿನ ಕಿಚ್ಚು ಮುಂದಿನ ಚುನಾವಣೆ ಫಲಿತಾಂಶದ ಬಳಿಕವೂ ಮುಂದುವರಿದರೆ, ಅತ್ತ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದರೆ, ಕಾಂಗ್ರೆಸ್ ಗೆ ಜೆಡಿಎಸ್ ಈಗಿನ ಎಲ್ಲಾ ಕೆಚ್ಚುಗಳನ್ನು ಸೇರಿಸಿ ಒಟ್ಟಿಗೇ ತಿರುಗೇಟು ಕೊಡುವುದರಲ್ಲಿ ಸಂಶಯವಿಲ್ಲ!

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಭಿನ್ನರ ಬಗ್ಗೆ ಬಿಎಸ್ ಯಡಿಯೂರಪ್ಪ ಸ್ಪೋಟಕ ಹೇಳಿಕೆ

ಇದು ಸೇವೆಗಾಗಿ ಬಂದ ಕಾಂಗ್ರೆಸ್ ಅಲ್ಲ, ವ್ಯಾಪಾರಕ್ಕಾಗಿ ಬಂದಿದ್ದು: ಛಲವಾದಿ ನಾರಾಯಣಸ್ವಾಮಿ

ಸಾಲಗಾರನ ಮಗಳನ್ನು ಕರೆದೊಯ್ದ ಪ್ರಕರಣ: ಆರೋಪಿ ಅರೆಸ್ಟ್‌

ನನ್ನ ಶೂ ನೆಕ್ಕಲು ಸಹ ಅರ್ಹನಲ್ಲ: ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟ ಇಂಡಿಗೋ ಸಿಬ್ಬಂದಿ

ಜಮ್ಮುನಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ಏರ್‌ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌: ಕಾರಣ ನಿಗೂಢ

ಮುಂದಿನ ಸುದ್ದಿ
Show comments