ಏರ್ಪೋರ್ಟ್ ರಸ್ತೆಯಲ್ಲಿ ಟೋಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ಕೂಡ ಪ್ರತಿಭಟನೆಯ ಸ್ಥಳಕ್ಕೆ ಧಾವಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೊಂದು ಅವೈಜ್ಞಾನಿಕ ಏರಿಕೆಯಾಗಿದ್ದು, ಸರ್ಕಾರ ಈ ಕುರಿತು ಕೂಡಲೇ ಬೆಲೆ ತಗ್ಗಿಸಬೇಕೆಂದು ನುಡಿದರು. ಇದು ವಿವೇಚನೆಯಿಂದ ಕೂಡಿದ ತೀರ್ಮಾನವಲ್ಲ ಎಂದು ದೇವೇಗೌಡರು ಹೇಳಿದರು.
ಸರ್ಕಾರ ದರ ಪರಿಷ್ಕರಣೆ ಮಾಡಬೇಕು. ಹಿಂದಿನ ಸರ್ಕಾರದ ತೀರ್ಮಾನ ವಿವೇಚನೆಯಿಂದ ಕೂಡಿಲ್ಲ. ನಾವು ಶಾಂತಿಯಿಂದ ಪ್ರತಿಭಟನೆ ಮಾಡ್ತೇವೆ ಎಂದು ದೇವೇಗೌಡರು ಹೇಳಿದರು.
ಇದು ಹಗಲು ದರೋಡೆಯಾಗಿದ್ದು, ಇದನ್ನು ನಿಲ್ಲಿಸದಿದ್ದರೆ ನಾವು 9ನೇ ತಾರೀಖು ಬೆಳಗಿನಿಂದ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ಲಾರೀ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.