Select Your Language

Notifications

webdunia
webdunia
webdunia
webdunia

ಜೆಡಿಎಸ್ ಅಭ್ಯರ್ಥಿ ಸೋತರೆ ಮೈಸೂರಿಗೆ ಕಾಲಿಡಲ್ಲ ಎಂದ ಶಪಥವನ್ನು ಮುರಿದ ಗೌಡರು

ಜೆಡಿಎಸ್ ಅಭ್ಯರ್ಥಿ ಸೋತರೆ ಮೈಸೂರಿಗೆ ಕಾಲಿಡಲ್ಲ ಎಂದ ಶಪಥವನ್ನು ಮುರಿದ ಗೌಡರು
ಮೈಸೂರು , ಗುರುವಾರ, 16 ಅಕ್ಟೋಬರ್ 2014 (14:47 IST)
ಜೆಡಿಎಸ್ ಅಭ್ಯರ್ಥಿ ಸೋತರೆ ಮೈಸೂರಿಗೆ ಕಾಲಿಡಲ್ಲ ಎಂದು ಶಪಥ ಮಾಡಿದ್ದ ದೇವೇಗೌಡರು ತಮ್ಮ ಶಪಥವನ್ನು ಮುರಿದು ಇಂದು ಮೈಸೂರಿಗೆ ಆಗಮಿಸಿದ್ದಾರೆ.
 
ಮೈಸೂರಿಗೆ ಆಗಮಿಸಿದ ಬಗ್ಗೆ ಸಮರ್ಥನೆ ನೀಡಿದ ದೇವೇಗೌಡರು, ಚುನಾವಣೆಗಳ ಸಂದರ್ಭದಲ್ಲಿ ಭಾವುಕರಾಗಿ ಈ ರೀತಿ ಹೇಳಿಕೆ ನೀಡುವುದು ಸಹಜ. ಚುನಾವಣೆ ನಂತರ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದೇನೆ ಎಂದರು.
 
ಮೈಸೂರಿನ ವಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾದ ಅವರು ನಾನು ಪಕ್ಷಾತೀತವಾಗಿ ನಾನು ಕೆಲಸ ಮಾಡುತ್ತಿದ್ದೇನೆ.ಹಿಂದೆ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರಿಂದ, ದೇಶದ ಸಂಪೂರ್ಣ ಅಭಿವೃದ್ಧಿಯ ಬಗ್ಗೆ ಗಮನಹರಿಸುತ್ತೇನೆ ಎಂದು ಗೌಡರು ತಿಳಿಸಿದ್ದಾರೆ.  

Share this Story:

Follow Webdunia kannada