Select Your Language

Notifications

webdunia
webdunia
webdunia
webdunia

ನನ್ನನ್ನು ಡಿಸಿಎಂ ಮಾಡಿದ್ದುದು ದೇವೇಗೌಡರಲ್ಲ: ಸಿಎಂ ಸಿದ್ದರಾಮಯ್ಯ

ನನ್ನನ್ನು ಡಿಸಿಎಂ ಮಾಡಿದ್ದುದು ದೇವೇಗೌಡರಲ್ಲ: ಸಿಎಂ ಸಿದ್ದರಾಮಯ್ಯ
ಕೊಪ್ಪಳ , ಶುಕ್ರವಾರ, 30 ಜನವರಿ 2015 (11:22 IST)
ನನ್ನನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಜೆಡಿಯು ಪಕ್ಷದ ಮುಖಂಡರು. ದೇವಗೌರಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಇಂದು ಜೆಡ್ಎಸ್ ವರಿಷ್ಠ ದೇವೇಗೌಡರಿಗೆ ಇಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ದೇವೇಗೌಡರು ಬುದ್ದಿವಾದ ಹೇಳಬೇಕಿಲ್ಲ. ಏಕೆಂದರೆ ನನಗೆ ಈ ಹಿಂದೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟಿದ್ದು, ಜೆಡಿಯು ಪಕ್ಷದ ಮುಖಂಡರು, ದೇವೆಗೌಡರಲ್ಲ ಎಂದರು.

ಬಳಿಕ ಮಾತನಾಡಿದ ಅವರು, ವಸತಿ ಸಚಿವ ಅಂಬರೀಶ್ ಹಾಗೂ ನನ್ನ ನಡುವೆ ಯಾವುದೇ ರೀತಿಯ ಮಾತಿನ ಚಕಮಕಿ ನಡೆದಿಲ್ಲ. ಅದು ಕೇವಲ ಮಾಧ್ಯಮಗಳು ಸೃಷ್ಠಿಸಿದ ವದಂತಿಯಷ್ಟೇ ಎಂದರು. ಇದೇ ವೇಳೆ, ಸತೀಶ್ ಜಾರಕಿಹೋಳಿ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜಾರಕಿಹೋಳಿ ಅವರ ನಿಯೋಗದೊಂದಿಗೆ ನಾನು ನಿನ್ನೆ ಚರ್ಚಿಸಿದ್ದು, ಸಚಿವರು ಶೀಘ್ರವೇ ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆಯಲಿದ್ದಾರೆ. ಅಲ್ಲದೆ ಯಾವುದೇ ರೀತಿಯ ಬೇಡಿಕೆ ಅಥವಾ ಷರತ್ತುಗಳನ್ನು ಅವರು ಹಾಕಿಲ್ಲ. ಆದರೆ ಮುಂದಿನ ಸಂಪುಟ ವಿಸ್ತರಣೆ ವೇಳೆ ಅವರಿಗೆ ಉತ್ತಮ ಖಾತೆಯನ್ನು ನೀಡಲಾಗುವುದು ಎಂದರು.  

ತಮ್ಮ ಪ್ರಾದೇಶಿಕ ಆಡಳಿತ ಕಚೇರಿಯನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುತ್ತಿದ್ದ ವೇಳೆ ನಡೆದಿದ್ದ ಕೊನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ದೇವೇಗೌಡರು, ಸಿಎಂ ಸಿದ್ದರಾಮಯ್ಯನವರೂ ಕೂಡ ಬೆಳೆದ ಮನೆ ಇದೇ. ಅದನ್ನು ಅವರು ಯಾವತ್ತೂ ಮರೆಯಬಾರದು ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ರೀತಿಯಾಗಿ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada