Select Your Language

Notifications

webdunia
webdunia
webdunia
webdunia

ಅಂಗೈ ಹುಣ್ಣಿಗೆ ಸಿಎಂಗೆ ಕನ್ನಡಿ ಬೇಕೆ: ದೇವೇಗೌಡರ ಪ್ರಶ್ನೆ

ಅಂಗೈ ಹುಣ್ಣಿಗೆ ಸಿಎಂಗೆ ಕನ್ನಡಿ ಬೇಕೆ: ದೇವೇಗೌಡರ ಪ್ರಶ್ನೆ
ಬೆಂಗಳೂರು , ಶನಿವಾರ, 15 ನವೆಂಬರ್ 2014 (16:29 IST)
ಅಂಗೈ ಹುಣ್ಣಿಗೆ ಸಿಎಂ ಸಿದ್ದರಾಮಯ್ಯಗೆ ಕನ್ನಡಿ ಬೇಕೆ. 1995ರಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದೆ.  ಬಿಎಂಐಸಿ ಯೋಜನೆಗೆ ನಾನೇ ಅನುಮೋದನೆ ನೀಡಿದ್ದೆ. ಅಲ್ಲಿಂದ ಇಲ್ಲಿವರೆಗೆ ಸಿಬಿಐ ತನಿಖೆಯಾಗಲಿ. ಈ ವಿಚಾರವನ್ನು ಸಂಸತ್ತಿನಲ್ಲಿ ಕೂಡ ಚರ್ಚಿಸುತ್ತೇನೆ.  ಸದನಸಮಿತಿ ಬಗ್ಗೆ ನನಗೆ ನಂಬಿಕೆಯಿಲ್ಲ, ಸಿಬಿಐ ತನಿಖೆಯಾಗಲಿ ಎಂದು ಜೆಡಿಎಸ್ ಕಚೇರಿಯಲ್ಲಿ ದೇವೇಗೌಡರು ತಿಳಿಸಿದ್ದಾರೆ.

 ಬಿಎಂಐಸಿ ಯೋಜನೆಯಲ್ಲಿ ತಮ್ಮ ವಿರುದ್ಧ ಅಕ್ರಮ ಭೂ ಮಂಜೂರಾತಿಯ ಆರೋಪವನ್ನು ದೇವೇಗೌಡರು ಮಾಡಿದ್ದಾರೆ. ದೇವೇಗೌಡರ ಆಪಾದನೆಗಳ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಭೂಮಂಜೂರಾತಿ ಅಧಿಕಾರವಿರಲಿಲ್ಲ.  

ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಆರೋಪಿಸಿದ್ದಾರೆ. ನನ್ನನ್ನು ಮತ್ತು ನನ್ನ ಸೋದರನನ್ನು ರಾಷ್ಟ್ರೀಯವಾಗಿ ತೇಜೋವಧೆ ಮಾಡೋದಕ್ಕೆ ಪ್ರಯತ್ನಿಸಿದ್ದಾರೆ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದರು.  ಈ ಹಿನ್ನೆಲೆಯಲ್ಲಿ ಅಂಗೈ ಹುಣ್ಣಿಗೆ ಸಿದ್ದರಾಮಯ್ಯಗೆ ಕನ್ನಡಿ ಬೇಕೆ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.  

1995ರಿಂದ ನಡೆದ ಕೆರೆ ಒತ್ತುವರಿ ಬಗ್ಗೆ ತನಿಖೆಯಾಗಲಿ. ಸಿಬಿಐನಿಂದ ಬೇಕಾದ್ರೂ ತನಿಖೆ ಮಾಡಿ, ಸುಮ್ಮನೆ ಹೇಳಿಕೆಗಳನ್ನು ತಳ್ಳಿಹಾಕುವ ಪ್ರಯತ್ನ ಬೇಡ ಎಂದು ದೇವೇಗೌಡರು ಹೇಳಿದರು. 

Share this Story:

Follow Webdunia kannada