Select Your Language

Notifications

webdunia
webdunia
webdunia
webdunia

ದಿಯೋರಾ ನಿಧನ: ಒಂದು ದಿನದ ಮಟ್ಟಿಗೆ ಅಧಿವೇಶನ ಮುಂದೂಡಿಕೆ

ದಿಯೋರಾ ನಿಧನ: ಒಂದು ದಿನದ ಮಟ್ಟಿಗೆ ಅಧಿವೇಶನ ಮುಂದೂಡಿಕೆ
ನವದೆಹಲಿ , ಸೋಮವಾರ, 24 ನವೆಂಬರ್ 2014 (11:48 IST)
ಚಳಿಗಾಲದ ಅಧಿವೇಶನ ಇಂದು ಆರಂಭವಾಗಿದ್ದು, ದಿಯೋರಾ ನಿಧನರಾಗಿರುವ ಹಿನ್ನೆಲೆಯಲ್ಲಿ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಆಗಮಿಸಿ ಭಾಷಣ ಮಾಡಿ, ದೇಶದ ಹಿತಕ್ಕಾಗಿ ಒಳ್ಳೆಯ ಕೆಲಸಕಾರ್ಯಗಳಾಗುತ್ತವೆ, ಚಳಿಗಾಲದ ಅಧಿವೇಶನ ಸುಗಮವಾಗಿ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ನೂತನ ಸಂಸದರನ್ನು ಪರಿಚಯಿಸಿ ಅವರ ಖಾತೆಗಳ ವಿವರ ನೀಡಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಮಾತನಾಡಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ದಿಯೋರಾ ನಿಧನ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಲಾಯಿತು. 
 

Share this Story:

Follow Webdunia kannada