Select Your Language

Notifications

webdunia
webdunia
webdunia
webdunia

ಕಿವಿ ಕೇಳದವರು, ಪ್ರಶ್ನೆಗೆ ಉತ್ತರಿಸಲಾಗದವರು ಸಂಪುಟದಲ್ಲಿದ್ದಾರೆ: ಕೋಳಿವಾಡ

ಕಿವಿ ಕೇಳದವರು, ಪ್ರಶ್ನೆಗೆ ಉತ್ತರಿಸಲಾಗದವರು ಸಂಪುಟದಲ್ಲಿದ್ದಾರೆ: ಕೋಳಿವಾಡ
ಬೆಂಗಳೂರು , ಮಂಗಳವಾರ, 2 ಸೆಪ್ಟಂಬರ್ 2014 (11:12 IST)
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕೋಳಿವಾಡ ಹೇಳಿಕೆ ನೀಡಿ ಕಿವಿ ಕೇಳದವರು, ಪ್ರಶ್ನೆಗೆ ಉತ್ತರಿಸಲಾಗದವರು, ಅನಾರೋಗ್ಯದ ಸಚಿವರು  ಸಂಪುಟದಲ್ಲಿದ್ದಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸಿಎಂ ಅನಹ್ರ ಸಚಿವರನ್ನು ಪತ್ತೆ ಹಚ್ಚಿ ಅರ್ಹರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು.

ಈ ಹಿನ್ನೆಲೆಯಲ್ಲಿ  ಸಂಪುಟ ಪುನಾರಚನೆ ಮಾಡುವಂತೆ 40 ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಿಳಿಸಿದ್ದೆವು. ಆದರೆ ಸಿದ್ದರಾಮಯ್ಯ ಅಂತಹ ಅಸಮರ್ಥರನ್ನು ಕೈಬಿಟ್ಟು ಸಂಪುಟ ಪುನಾರಚನೆಗೆ ಒಪ್ಪಿಲ್ಲ. ಆದರೆ ಸಂಪುಟ ವಿಸ್ತರಣೆಯಲ್ಲಿ  ಅತ್ಯಂತ ಹಿರಿಯ ಶಾಸಕನಾಗಿರುವುದರಿಂದ ಕ್ಯಾಬಿನೆಟ್ ಹುದ್ದೆ ಬಿಟ್ಟು ಬೇರೆ ಯಾವುದೇ ಹುದ್ದೆ ನೀಡಿದರೂ ನಾನು ಸ್ವೀಕರಿಸುವುದಿಲ್ಲ ಎಂದು ಕೋಳಿವಾಡ ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಮಾಡುತ್ತಿರುವ ಬೆನ್ನಲ್ಲೇ ಅನೇಕ ಶಾಸಕರು ದೆಹಲಿಯ ಕಾಂಗ್ರೆಸ್ ಮುಖಂಡರಿಗೆ ಲಾಬಿ ನಡೆಸಲು ದೆಹಲಿಗೆ ದೌಡಾಯಿಸಿದ್ದಾರೆ. 

Share this Story:

Follow Webdunia kannada