Webdunia - Bharat's app for daily news and videos

Install App

ಬೆಂಗಳೂರು ಸಿಟಿಗೆ ನೂತನ ಕಮಿಷನರ್ ಆಗಿ ದಯಾನಂದ ಅಧಿಕಾರ ಸ್ವೀಕಾರ

Webdunia
ಬುಧವಾರ, 31 ಮೇ 2023 (20:00 IST)
ದಯಾನಂದ
ಬೆಂಗಳೂರು ಸಿಟಿಗೆ ನೂತನ ಕಮೀಷನರ್ ಆಗಿ ದಯಾನಂದ ‌ಅಧಿಕಾರ ಸ್ವೀಕರಿಸಿದ್ರು. ನಿರ್ಗಮಿತ ಕಮೀಷನರ್ ಪ್ರತಾಪ್‌ ರೆಡ್ಡಿ ಅವರಿಂದ ಬ್ಯಾಟನ್ ಪಡೆದು ಅಧಿಕಾರ ವಹಿಸಿಕೊಂಡರು.ನಂತರ ಮಾತನಾಡಿದ  ನಾನು ಕೂಡ ಬೆಂಗಳೂರಿನ ಮಗ ಈ ಇಲಾಖೆಯಲ್ಲಿ ಅನೇಕ ಹಿರಿಯ ಅಧಿಕಾರಿಗಳಾದ ಕಮಲ್‌ ಪಂತ್, ಪ್ರತಾಪ್‌ ರೆಡ್ಡಿ ಸೇರಿ ಹಲವಾರು ಮಂದಿ ಕೆಲಸ ಮಾಡಿದ್ದಾರೆ, ಎಲ್ಲಾರನ್ನ  ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ಕೊಡುವ ಬಗ್ಗೆ ಚಿಂತನೆ ಮಾಡುತ್ತೇನೆ ಇನ್ನೂ ನನ್ನ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ಕೊಟ್ಟ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಕೃತಜ್ಞತೆ ಗಳನ್ನ ಸಲ್ಲಿಸುತ್ತೇನೆ . ಇಂಟಲಿಜೆನ್ಸ್ ಪೊಲೀಸ್ ಇಲಾಖೆಯ ಒಂದು ಭಾಗ ಇಲ್ಲಿ ಸಾಕಷ್ಟು ಸುಧಾರಣೆ ಆಗಬೇಕು, ಸೈಬರ್ ಕ್ರೈಂ ತಡೆಗಟ್ಟಲು  ನುರಿತ  ತಂತ್ರಜ್ಞರನ್ನ ನೇಮಿಸಿಲಾಗುವುದು ಅಲ್ಲದೆ ಸಿಟಿಯಲ್ಲಿ ರೌಡಿಗಳ ಚಟುವಟಿಕೆಗಳನ್ನು ಮಟ್ಟಹಾಕುತ್ತೇವೆ , ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ರೌಡಿ ಅಸಾಮಿಗಳನ್ನ ಬಿಡೊದಿಲ್ಲ ಜತೆಗೆ ಬೆಂಗಳೂರು ನಗರಕ್ಕೆ ಟ್ರಾಫಿಕ್ ಸಮಸ್ಯೆ ಕೂಡ ದೊಡ್ಡದು ನಾನು ಕೂಡ ಟ್ರಾಫಿಕ್ ಅಡಿಷನಲ್ ಕಮೀಷನರ್ ಆಗಿ ಕೆಲಸ ಮಾಡಿದ್ದೇನೆ ಇದಕ್ಕೆ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಮಾಡುತ್ತೇವೆಂದು ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶುಭಾಂಶು ಶುಕ್ಲಾ ಹೊರಟಿದ್ದ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಯಶಸ್ವೀ ಡಾಕಿಂಗ್

ಕೃತಕ ಫುಡ್‌ ಕಲರ್‌ ಬೆನ್ನಲ್ಲೇ ಕೆಲ ಔಷಧಗಳು, ಸೌಂದರ್ಯವರ್ಧಕಗಳ ಬಳಕೆಗೆ ನಿಷೇಧ ಹೇರಿದ ರಾಜ್ಯ ಸರ್ಕಾರ

ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿ ಮಹಿಳೆಯ ಹುಚ್ಚಾಟ, Video

ವಯನಾಡು ಭೂಕುಸಿತದ ವೇಳೆ ನಿರ್ಮಾಣವಾಗಿದ್ದ ಬೈಲಿ ಸೇತುವೆ ಗೋಡೆ ಬಿರುಕು: ಸಂಚಾರ ಸ್ಥಗಿತ

ವಿಮಾನ ದುರಂತಕ್ಕೆ ಕಾರಣ ಹುಡುಕುತ್ತಿದ್ದ ಅಧಿಕಾರಿಗಳಿಗೆ ಸಿಕ್ತು ಬಿಗ್‌ ಅಪ್ಡೇಟ್‌

ಮುಂದಿನ ಸುದ್ದಿ
Show comments