ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದ ಪುತ್ರಿಯ ಫೀಸ್ ಭರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ನಗರದ ಬೃಂದಾವನ ಬಡಾವಣೆಯ ನಿವಾಸಿಯಾದ ಗಂಗಾದರ್ ದಂಪತಿಗಳಿಗೆ ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿರುವ ಪುತ್ರಿಯ 12500 ರೂಪಾಯಿ ಕಾಲೇಜು ಫೀಸ್ ಕಟ್ಟಲು ಹರಸಾಹಸ ಪಟ್ಟರೂ ಹೊಂದಿಸಲಾಗಲಿಲ್ಲ. ಬಂಧು ಬಳಗವರ ಮನೆಬಾಗಿಲಿಗೆ ತೆರಳಿ ಕೈಯೊಡ್ಡಿದರೂ ಎಲ್ಲಿಯೂ ಹಣ ದೊರೆತಿರಲಿಲ್ಲ ಎನ್ನಲಾಗಿದೆ.
ಪುತ್ರಿ ತುಂಬಾ ಪ್ರತಿಭಾವಂತೆಯಾಗಿದ್ದರಿಂದ ತಂದೆ ಗಂಗಾಧರ ತುಂಬಾ ಕಷ್ಟಪಟ್ಟು ಓದಿಸುತ್ತಿದ್ದ ಎನ್ನಲಾಗಿದೆ. ಇದೀಗ ಪುತ್ರಿ ಬಿಎಸ್ಸಿ ಅಂತಿಮ ವರ್ಷದಲ್ಲಿರುವಾಗ ತಂದೆ ಇಹಲೋಕವೇ ತ್ಯಜಿಸಿದ್ದಾನೆ.
ಇದರಿಂದ ಮನನೊಂದ ಗಂಗಾಧರ ಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.