Webdunia - Bharat's app for daily news and videos

Install App

ನಾನಿನ್ನು ಹೇಗೆ ಮುಖ ತೋರಿಸಲಿ ಎನ್ನುತ್ತಿರುವ ದರ್ಶನ್, ಬಾಸ್ ನಂಬಿ ಜೀವನ ಹಾಳಾಯ್ತು ಎನ್ನುತ್ತಿರುವ ಗ್ಯಾಂಗ್

Krishnaveni K
ಶನಿವಾರ, 15 ಜೂನ್ 2024 (10:36 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಮತ್ತು ಸಹಚರರು ಈಗ ಕಂಬಿ ಹಿಂದೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್ ಪೊಲೀಸರ ಮುಂದೆಯೇ ತಮ್ಮಿಂದಾಗಿ ಅಭಿಮಾನಿಯ ಸಾವಾಯಿತಲ್ಲ ಎಂದು ಪಶ್ಚಾತ್ತಾಪ ಪಡುತ್ತಿದ್ದಾರಂತೆ. ಆದರೆ ಈಗ ಕಾಲ ಮೀರಿ ಹೋಗಿದೆ. ಎಲ್ಲಾ ಕಡೆ ತಮ್ಮ ಬಗ್ಗೆ ನೆಗೆಟಿವ್ ಕಾಮೆಂಟ್ ಗಳು ಕೇಳಿಬರುತ್ತಿರುವುದು ದರ್ಶನ್ ಗೂ ಧೃತಿಗೆಡಿಸಿದೆ. ಅಲ್ಲದೆಮ ನಿನ್ನೆ ಆರೋಪಿಗಳಲ್ಲಿ ಒಬ್ಬರಾದ ಅನುಕುಮಾರ್ ತಂದೆ ಇದೇ ನೋವಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ತಿಳಿದು ದರ್ಶನ್ ಮತ್ತು ಇತರರು ಇನ್ನಷ್ಟು ಕುಗ್ಗಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಇಂಡಸ್ಟ್ರಿಯಲ್ಲಿ ಇನ್ನು ಎಲ್ಲರನ್ನೂ ಹೇಗೆ ಫೇಸ್ ಮಾಡಲಿ, ಅಭಿಮಾನಿಗಳನ್ನು ಹೇಗೆ ಎದುರಿಸಲಿ. ನನ್ನಿಂದಾಗಿ ಇಷ್ಟು ಜನರ ಜೀವನ ಹಾಳಾಯ್ತು. ಒಬ್ಬ ಅಭಿಮಾನಿಯ ಸಾವಿಗೆ ನಾನೇ ಕಾರಣನಾದೆ ಎಂದು ದರ್ಶನ್ ಪಶ್ಚತ್ತಾಪ ಪಟ್ಟಿದ್ದಾರಂತೆ. ಇದರಿಂದಾಗಿ ಮಾನಸಿಕವಾಗಿಯೂ ಅವರು ಕುಗ್ಗಿ ಹೋಗಿದ್ದಾರಂತೆ.

ಇನ್ನು, ದರ್ಶನ್ ಜೊತೆ ಅರೆಸ್ಟ್ ಆಗಿರುವ ಆರೋಪಿಗಳೂ ಬೇಸರಪಟ್ಟುಕೊಳ್ಳುತ್ತಿದ್ದಾರೆ. ಬಾಸ್ ಬಾಸ್ ಎಂದು ಅವರಿಗಾಗಿ ಇಂತಹ ಕೆಲಸ ಮಾಡಿ ನಮ್ಮ ಜೀವನವೇ ಹಾಳಾಯ್ತು, ನಮ್ಮ ಕುಟುಂಬದವರೂ ನಮ್ಮನ್ನು ನಂಬುತ್ತಿಲ್ಲ, ಸಹಾಯಕ್ಕೆ ಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರಂತೆ. ಕೆಟ್ಟ ಮೇಲೆ ಬುದ್ಧಿ ಬಂದು ಏನು ಪ್ರಯೋಜನ ಹೇಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗುತ್ತಿಗೆದಾರರ ಪತ್ರ ಓದಿ ನಿಮಗೆ ನಾಚಿಕೆ ಆಗಲಿಲ್ಲವೇ: ಸಿ.ಟಿ.ರವಿ

ಸಿಎಂ, ಡಿಸಿಎಂಗೆ ಜವಾಬ್ಧಾರಿ ಇದ್ದಿದ್ದರೆ ಅತಿವೃಷ್ಟಿಗೆ ಪರಿಹಾರ ಒದಗಿಸುತ್ತಿದ್ದರು: ಆರ್ ಅಶೋಕ

ಕೊನೆಗೂ ಹುಷಾರಾದ್ರು ಮಲ್ಲಿಕಾರ್ಜುನ ಖರ್ಗೆ: ಆಸ್ಪತ್ರೆಯಿಂದ ಡಿಸ್ಚಾರ್ಜ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ದಸರಾ ಪಾಸ್ ನಲ್ಲಿ ಗೋಲ್ ಮಾಲ್: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಗಂಭೀರ ಆರೋಪ

ಮುಂದಿನ ಸುದ್ದಿ
Show comments