Select Your Language

Notifications

webdunia
webdunia
webdunia
webdunia

ದಲಿತರು ಕ್ರೈಸ್ತ ಧರ್ಮಕ್ಕೆ ಸೇರಿ ಮೀಸಲಾತಿ ಪಡಿಯೋದು ಸರಿಯಲ್ಲ: ಎಚ್.ಆಂಜನೇಯ್

ದಲಿತರು ಕ್ರೈಸ್ತ ಧರ್ಮಕ್ಕೆ ಸೇರಿ ಮೀಸಲಾತಿ ಪಡಿಯೋದು ಸರಿಯಲ್ಲ: ಎಚ್.ಆಂಜನೇಯ್
ರಾಯಚೂರು , ಭಾನುವಾರ, 26 ಜೂನ್ 2016 (11:19 IST)
ದಲಿತರಿಗೆ ಮೀಸಲಾತಿ ಬೇಕಿದ್ದರೆ ಹಿಂದೂ ಧರ್ಮದಲ್ಲೇ ಇರಲ್ಲಿ. ಕ್ರೈಸ್ತ ಧರ್ಮಕ್ಕೆ ಸೇರಿ ಮೀಸಲಾತಿ ಪಡಿಯೋದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ್ ಬಾಂಬ್ ಸಿಡಿಸಿದ್ದಾರೆ.
 
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ್, ದಲಿತರಿಗೆ ಮೀಸಲಾತಿ ಬೇಕಿದ್ದರೆ ಹಿಂದೂ ಧರ್ಮದಲ್ಲೇ ಇರಲ್ಲಿ. ಕ್ರೈಸ್ತ ಧರ್ಮಕ್ಕೆ ಸೇರಿ ಮೀಸಲಾತಿ ಪಡಿಯೋದು ಸರಿಯಲ್ಲ. ಕ್ರೈಸ್ತ ಧರ್ಮದಲ್ಲಿದುಕೊಂಡು ಮೀಸಲಾತಿ ಪಡೆದುಕೊಳ್ಳುವುದು ಸರಿಯಲ್ಲ. ನಿಮಗೆ ಮಿಸಲಾತಿ ಬೇಕೆಂದರೆ ಹಿಂದೂ ಧರ್ಮದಲ್ಲೇ ಇದ್ದು ಮೀಸಲಾತಿ ಪಡೆದುಕೊಳ್ಳಿ ಎಂದು ತಳಿಸಿದ್ದಾರೆ.
 
ಈ ಹಿಂದೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ್ ಅವರು ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನೂ ಈ ಹೇಳಿಕೆಯಿಂದ ಯಾವ ಪ್ರತಿಕ್ರಿಯೆಗಳು ದೊರೆಯುತ್ತವೆಯೋ ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಂತರಿಕ ಬಿಕ್ಕಟ್ಟಿನಿಂದ ರಾಜ್ಯ ಸರಕಾರ ಪತನವಾಗಲಿದೆ: ಸದಾನಂದ ಗೌಡ