ಯುವತಿಯಕ ಮೇಲೆ ಅತ್ಯಾಚಾರವೆಸಗಿರುವವರ ಕೈಗಳನ್ನು ಕತ್ತರಿಸಿ ಹಾಕಿ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಪ್ರತಿನಿತ್ಯ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಆರೋಪಿಗಳಿಗೆ ಕಾನೂನಿನ ಭಯ ಇಲ್ಲವಾಗಿದೆ. ಆದ್ದರಿಂದ, ಅತ್ಯಾಚಾರವೆಸಗಿದ ಆರೋಪಿಗಳ ಕೈಗಳನ್ನು ಕತ್ತರಿಸಿ ಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರೋಪಿಗಳ ಕೈ ಕತ್ತರಿಸಿ ಬಂದವರಿಗೆ ಶ್ರೀರಾಮಸೇನೆ ರಕ್ಷಣೆ ನೀಡುವುದಲ್ಲದೇ ಕಾನೂನಿನ ನೆರವು ನೀಡುತ್ತದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುಕಾಲಿಕ್ ಕರೆ ನೀಡಿದ್ದಾರೆ