Webdunia - Bharat's app for daily news and videos

Install App

ಕರಿಬೇವಿನ ಸೊಪ್ಪು ಬಲು ದುಬಾರಿ

Webdunia
ಬುಧವಾರ, 23 ಮಾರ್ಚ್ 2022 (19:49 IST)
ಎಲ್ಲಾದರ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದೆ. ಈಗ ಅಡುಗೆ ಮಾಡಲು ಬಳಸುವ , ಅಡುಗೆಗೆ ಅತೀ ಮುಖ್ಯವಾಗಿ ಬೇಕಾದ ಕರಿಬೇವು ಈಗ ಕಹಿಬೇವು ಆಗೋಗಿದೆ. ಹಿಂದೆ ಮಾರ್ಕೆಟ್ ನಲ್ಲಿ ಕರಿಬೇವು ಹೆಚ್ಚಾಗಿ ರವಾನೆಯಾಗ್ತಿತ್ತು.ಆದ್ರೆ ಈಗ ಕರಿಬೇವಿನ ಎಲೆಗಳು ಉದುರುವ ಸಮಯ . ಅಷ್ಟೇ ಅಲ್ಲದೇ ಈಗ ಕರಿಬೇವು ಮಾರುಕಟ್ಟೆ ಯಲ್ಲಿ ಕಡಿಮೆ ರಫ್ತಾಗ್ತಿದೆ .ಚಳಿಗಾಲದ ಅಂತ್ಯದ ವೇಳೆಗೂ ಕರಿಬೇವು ಸೊಪ್ಪಿನ ಇಳಿವರಿ ಪ್ರಮಾಣ ಕಡಿಮೆಯಾಗಿದೆ.ಮಾರುಕಟ್ಟೆಯಲ್ಲಿ ಬೇಡಿಕೆಯ ಅರ್ಧದಷ್ಟು ಮಾತ್ರವೇ ಕರಿಬೇವು ಪೂರೈಕೆಯಾಗ್ತಿರೋದ್ರಿಂದ ಕರಿಬೇವಿನ ದರ ಎಲ್ಲಾ ಕಡೆಯಿಂದಲೂ ಗಗನಕ್ಕೇರಿದೆ.ಕರಿಬೇವಿನ ಬೆಲೆ ಹಿಂದೆ  ಕೆ.ಜಿ ಗೆ  60 ರೂಪಾಯಿ ಇತ್ತು. ಆದ್ರೆ ಈಗ ಕರಿಬೇವಿನ ಬೆಲೆ 160-180 ಗೆ ಏರಿಕೆಯಾಗಿದೆ. ಇಳುವರಿ ಕುಂಠಿತವಾದ ಹಿನ್ನೆಲೆಯಲ್ಲಿ ಪೂರೈಕೆಯೂ ಇಳಿಕೆಯಾಗಿದೆ. ಬಡ ಜನರ ಪಾಲಿಗಂತೂ  ಕರಿಬೇವು ಈಗ ಕಹಿಯಾಗೋಗಿದೆ. ವ್ಯಾಪಾರಿಗಳಿಗಂತೂ ಸರಿಯಾಗಿ ಸೊಪ್ಪು ಸಿಗ್ತಿಲ್ಲ. ಮೊದಲಿನಂತೆ ಕರಿಬೇವು ಬರ್ತಿಲ್ಲ. ಮಾರ್ಚ್ ಅಂತ್ಯದವರೆಗೂ ಇದೇ ರೀತಿ ಕರಿಬೇವಿನ ಬೆಲೆ  ಹೆಚ್ಚಿರಲಿದೆ ಅಂತಾ ವ್ಯಾಪಾರಿಗಳು ಹೇಳ್ತಿದ್ದಾರೆ. ಅಷ್ಟೇ ಅಲ್ಲದೇ ಮೊದಲಿನಂತೆ ವ್ಯಾಪಾರ ಆಗ್ತಿಲ್ಲ. ಬೆಲೆ ಹೆಚ್ಚಿರುವುದಕ್ಕೆ ಜನ ತೆಗೆದುಕೊಳ್ತಿಲ್ಲ ಅಂತಾ ವ್ಯಾಪಾರಿಗಳಂತೂ ವ್ಯಾಪಾರ ಇಲ್ಲದೇ ಕಂಗಾಲಾಗಿದ್ದಾರೆ.ಇನ್ನು ಗೃಹಿಣಿಯರಂತೂ ಪ್ರತಿನಿತ್ಯ ಅಡುಗೆ ಮಾಡಲು, ಒಗರಣೆಗೆ ಕರಿಬೇವನ್ನ ಹೆಚ್ಚೆಚ್ಚು ಬಳಸ್ತಾರೆ. ಕರಿಬೇವನ್ನ ಹೆಚ್ಚಾಗಿ ಬಳಸಿದ್ರೆ ಆರೋಗ್ಯಕ್ಕೆ ಒಳ್ಳೆದು. ಆದ್ರಲ್ಲೂ ಕಣ್ಣಿಗೆ ತುಂಬ ಒಳ್ಳೆಯದು ಹಾಗಾಗಿ ಹೆಚ್ಚಿಗೆ ಅಡುಗೆಯಲ್ಲಿ ಕರಿಬೇವು ಬಳಸ್ತಾರೆ. ಎಷ್ಟೋ ಮನೆಯಲ್ಲಿ ಕರಿಬೇವು ಇಲ್ಲ ಅಂದ್ರೆ ಅಡಿಗೆನ್ನೇ ಆಗಲ್ಲ. ಅಂತಾದ್ರಲ್ಲಿ ಈಗ ಮೂರು ಪಟ್ಟು ಕರಿಬೇವಿನ ಬೆಲೆ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರಂತೂ ಹೇಗಾಪ್ಪ ಅಡುಗೆ ಮಾಡೋಣ ಅಂತಾ ಅಸಾಮಾಧಾನಗೊಂಡಿದ್ದಾರೆ. ಎಲ್ಲಾದರ ಬೆಲೆ ಹೆಚ್ಚಾಳವಾಯ್ತು ಈಗ ಕರಿಬೇವಿನ ಬೆಲೆಯೂ ಹೀಗೆ ಹೆಚ್ಚಾದ್ರೆ ಹೇಗೆ ಅಂತಾ ಬೇಸರಗೊಂಡಿದ್ದಾರೆ.ಒಟ್ನಲ್ಲಿ ಈಗ ಕರಿಬೇವಿನ ಬೆಲೆ ಬಡವರ ಕೈಗೆ ಎಟುಕದ ಮಟ್ಟದಲ್ಲಿ ದುಬಾರಿಯಾಗೋಗಿದೆ.. ಮದ್ಯಮವರ್ಗದ ಜನರಂತೂ ಹೀಗೆ ಬೆಲೆ ಹೆಚ್ಚಾಳವಾದ್ರೆ ಏನುಮಾಡಣ್ಣ , ಹೇಗೆ ಅಡುಗೆ ಪದಾರ್ಥ ತೆಗೆದುಕೊಳ್ಳಣ್ಣ ಅಂತಾ ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗೋಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raghuwamshi murder: ಸೋನಂಗೆ ನನ್ನ ಮೇಲೆ ಇಂಟ್ರೆಸ್ಟೇ ಇಲ್ಲ ಎಂದಿದ್ದ ರಾಜ ರಘುವಂಶಿ

ಹಳೇ ಜಾತಿ ಸಮೀಕ್ಷೆಗೆ 187 ಕೋಟಿ ಖರ್ಚಾಯ್ತಲ್ಲಾ ಅಂದ್ರೆ ಅದೆಲ್ಲಾ ಪರ್ವಾಗಿಲ್ಲ ಎಂದ ಸತೀಶ್ ಜಾರಕಿಹೊಳಿ

E Tukaram: ಬಳ್ಳಾರಿ ಚುನಾವಣೆಗೆ ಬರೋಬ್ಬರಿ 21 ಕೋಟಿ ಹಣ ಬಳಕೆ: ಸಂಸದ ಇ ತುಕರಾಂ ಇಡಿ ವಶಕ್ಕೆ

Gold price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvamshi murder: ಗುಡ್ಡ ಹತ್ತಿ ಸುಸ್ತು ಎಂದಿದ್ದ ಹಂತಕರಿಗೆ ಸೋನಂ ನೀಡಿದ್ದ ಆಫರ್ ಏನು

ಮುಂದಿನ ಸುದ್ದಿ
Show comments