Select Your Language

Notifications

webdunia
webdunia
webdunia
webdunia

ಬೆಳಗಾವಿ ರಾಮದುರ್ಗದಲ್ಲಿ ಹಾಲಿ, ಮಾಜಿ ಶಾಸಕರ ಜಟಾಪಟಿ

ಬೆಳಗಾವಿ ರಾಮದುರ್ಗದಲ್ಲಿ ಹಾಲಿ, ಮಾಜಿ ಶಾಸಕರ ಜಟಾಪಟಿ
ಬೆಳಗಾವಿ , ಸೋಮವಾರ, 29 ಸೆಪ್ಟಂಬರ್ 2014 (17:29 IST)
ಬೆಳಗಾವಿಯ ರಾಮದುರ್ಗ ತಾಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಟಾಪಟಿ ನಡೆದು ಕೈಕೈ ಮಿಲಾಯಿಸುವ ಹಂತವನ್ನು ತಲುಪಿದ ಘಟನೆ ಸಂಭವಿಸಿದೆ. ಕಾಲುವೆಗೆ ನೀರು ಹರಿಸುವ ವಿಚಾರವಾಗಿ ರಾಮದುರ್ಗ ಶಾಸಕ  ಅಶೋಕ್ ಪಟ್ಟಣ್ ಮತ್ತು ಮಾಜಿ ಶಾಸಕ  ಮಹದೇವಪ್ಪ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಅಶೋಕ್ ಮತ್ತು ಮಹದೇವಪ್ಪ ಬೆಂಬಲಿಗರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಕೊನೆಗೆ ಕೆಲವರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಯಿತು. 

ಯಾದಗಿರಿಯಲ್ಲಿ ಜಿ.ಪಂ. ಸದಸ್ಯನಿಂದ ಬೆದರಿಕೆ
 ಯಾದಗಿರಿಯಲ್ಲಿ ಕೂಡ ಕಂದಕೂರ ಜಿ.ಪಂ. ಸದಸ್ಯ ಬೀಮರಾಯ ಜಿ.ಪಂ. ಸ್ಥಾಯಿಸಮಿತಿ ಚುನಾವಣೆ ಸಂದರ್ಭದಲ್ಲಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಮತಪೆಟ್ಟಿಗೆಗಳಿಗೆ ನೀರು ಸುರಿದು  ಪ್ರತಿಭಟನೆ ವ್ಯಕ್ತಪಡಿಸಿದರು. ತಮಗೆ ಚುನಾವಣೆಯ ನೋಟಿಸ್ ತಲುಪಿಲ್ಲದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳನ್ನು ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದರು. ಸಿಇಒ ವಿರುದ್ಧ ಅವರು ಜಾತಿ ನಿಂದನೆ ಆರೋಪವನ್ನೂ ಮಾಡಿದರು. 

Share this Story:

Follow Webdunia kannada