Webdunia - Bharat's app for daily news and videos

Install App

ಕಮ್ಯುನಿಸ್ಟರು, ತೃಪ್ತಿ ದೇಸಾಯಿಯಂಥವರಿಂದ ಶಬರಿಮಲೆ ಪಿಕ್ ನಿಕ್ ಸ್ಥಳವಾಗಿದೆ ಸಿಟಿ ರವಿ ಆಕ್ರೋಶ

Webdunia
ಶನಿವಾರ, 17 ನವೆಂಬರ್ 2018 (08:55 IST)
ಬೆಂಗಳೂರು: ಶಬರಿಮಲೆ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿಟಿ ರವಿ ಕೇರಳ ಸರ್ಕಾರ, ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ವಿರುದ್ಧ ಕಿಡಿ ಕಾರಿದ್ದಾರೆ.

ಶಬರಿಮಲೆ ಎನ್ನುವುದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಕೇರಳ ಸರ್ಕಾರದಿಂದಾಗಿ ಮತ್ತು ತೃಪ್ತಿ ದೇಸಾಯಿಯಂಥವರಿಂದಾಗಿ ಇದು ಪಿಕ್ ನಿಕ್ ಸ್ಪಾಟ್ ನಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಿಂದೂಗಳಿಗೆ ಶಬರಿಮಲೆ ಎಂದರೆ ಇರುಮುಡಿ ಕಟ್ಟು ಕಟ್ಟಿ, ಭಕ್ತಿ, ಸೇವಾ ಮನೋಭಾವದಿಂದ ಪೂಜೆ ಮಾಡುವ ಪವಿತ್ರ ಸ್ಥಳ. ಆದರೆ ಸುಪ್ರೀಂಕೋರ್ಟ್ ಮತ್ತು ಕಮ್ಯುನಿಸ್ಟರ ಬೆಂಬಲದಿಂದಾಗಿ ವೈಯಕ್ತಿಕ ಹಿತಾಸಕ್ತಿ ಹೊಂದಿರುವ ತೃಪ್ತಿ ದೇಸಾಯಿಯಂಥವರು ಅಯ್ಯಪ್ಪನ ಸ್ಥಾನವನ್ನು ಪಿಕ್ ನಿಕ್ ಸ್ಪಾಟ್ ಮಾಡಿದ್ದಾರೆ’ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಶಬರಿಮಲೆಗೆ ಪ್ರವೇಶಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿರುವ ತೃಪ್ತಿ ದೇಸಾಯಿ ನಿನ್ನೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟಾನಾಕಾರರಿಂದಾಗಿ ಹೊರಬರಲಾಗದೇ ಕಾಯಬೇಕಾಯಿತು. ಇಂದು ಶಬರಿಮಲೆ ದೇವಾಲಯ ಪ್ರವೇಶಿಸಿಯೇ ಸಿದ್ಧ ಎಂದು ತೃಪ್ತಿ ಈ ಹಿಂದೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

West Bengal: ಪೋಷಕರನ್ನು ಕೊಂದು ಅನಾಥಶ್ರಮದಲ್ಲಿನ ಇಬ್ಬರು ಶಿಕ್ಷಕರನ್ನು ಕೊಂದ ವ್ಯಕ್ತಿ

Liberian ಹಡಗು ದುರಂತ: ಇದೊಂದು ವಿಪತ್ತು ಎಂದ ಕೇರಳ ಸರ್ಕಾರ

ಬೆಂಗಳೂರು ಮಳೆಯ ಅವಘಡದಿಂದ ಎಚ್ಚೆತ್ತ ಡಿಸಿಎಂ ಶಿವಕುಮಾರ್‌ರಿಂದ ದಿಟ್ಟ ನಿರ್ಧಾರ

Bantwal Abdul Rahim Case: ಬಂಧಿತರಿಂದ ಇನ್ನಷ್ಟು ಮಂದಿಯ ಹೆಸರು ಬಯಲು

ಕನಸಿನಂತೆ ಮೂರು ತಿಂಗಳ ಹಿಂದೆ ಸೇನೆ ಸೇರಿದ ಯೋಧ ಹಠಾತ್ ಹೃದಯಾಘಾತದಲ್ಲಿ ಸಾವು

ಮುಂದಿನ ಸುದ್ದಿ
Show comments