Webdunia - Bharat's app for daily news and videos

Install App

ಬೊಗಳೇ ಬಿಡೋದೇ ಸಿ.ಎಸ್.ಪುಟ್ಟರಾಜು ಕೆಲಸ

Webdunia
ಗುರುವಾರ, 28 ನವೆಂಬರ್ 2019 (22:03 IST)
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಿರುದ್ಧ ಉಪ ಚುನಾವಣೆ ಅಖಾಡದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ.

ಮಂಡ್ಯದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ನಾವು ಹಣಕ್ಕೆ ಮಾರಾಟ ಮಾಡಿಕೊಂಡು ಬಿಜೆಪಿ ಪಕ್ಷ ಸೇರಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ದ್ರೋಹ, ವಿಶ್ವಾಸದ್ರೋಹ, ಡಬಲ್ ಗೇಮ್ ರಾಜಕಾರಣಿ ಯಾರಾದರೂ ಇದ್ದರೆ ಅದು ಪುಟ್ಟರಾಜು. ಹೀಗಂತ ಬಿಜೆಪಿ ಮುಖಂಡರಾದ ಎಸ್.ಅಂಬರೀಶ್, ಅಘಲಯ ಮಂಜುನಾಥ್, ಕಿಕ್ಕೇರಿ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದ್ರು.

ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋತರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಬೊಗಳೆ ಬಿಟ್ಟಿದ್ದ ಪುಟ್ಟರಾಜು, ಮೊದಲು ತಮ್ಮ ಮಾತಿನಂತೆ ನಡೆದುಕೊಂಡು ನಂತರ ರೀಲ್ ಬಿಡಬೇಕು ಎಂದಿದ್ದಾರೆ. 

ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮಾಜಿ ಸ್ಪೀಕರ್ ಕೃಷ್ಣ ಅವರನ್ನು ಸೋಲಿಸಲು ನೆರವಾಗಿ ವಿಶ್ವಾಸದ್ರೋಹ ಮಾಡಿದ್ದು ಇದೇ ಪುಟ್ಟರಾಜು. ನಡೆ ನುಡಿ ಒಂದಕ್ಕೊಂದು ಅರ್ಥವೇ ಇಲ್ಲ. ಮೋಸ ವಂಚನೆಗೆ ಇನ್ನೊಂದು ಹೆಸರೇ ಪುಟ್ಟರಾಜು ಎಂದು ಅಂಬರೀಶ್ ಲೇವಡಿ ಮಾಡಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments