Webdunia - Bharat's app for daily news and videos

Install App

ಬೆಳೆ ನಾಶ: ಅಧಿಕಾರಿಗಳ ಜತೆ ಚರ್ಚಿಸುವೆ ಎಂದ ಸಿಎಂ

Webdunia
ಸೋಮವಾರ, 17 ಸೆಪ್ಟಂಬರ್ 2018 (19:10 IST)
ಕಲಬುರಗಿ ತಾಲೂಕಿನ ಚೌಡಾಪೂರ ತಾಂಡದ ಸಂತೋಷ್ ಶಿವಾಜಿ ಕೋಕರೆ ಅವರ ಹೊಲದಲ್ಲಿ ತೊಗರಿ ಬೆಳೆ ಸಮೀಕ್ಷೆಯನ್ನು ಸಿಎಂ ನಡೆಸಿದರು. ಕಲಬುರಗಿಯಲ್ಲಿ ಬೆಳೆ ಸಮೀಕ್ಷೆ ನಡೆಸಿದಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಗಿಡಗಳು ಫಸಲು ಕಟ್ಟದೆ ಇರುವುದಕ್ಕೆ ಕಾರಣಗಳೇನು ಎಂದು ಅಧಿಕಾರಿಗಳಿಗೆ ಮಾಹಿತಿ ಕೇಳಿದರು.

ವಿಳಂಬವಾಗಿ ಬಿತ್ತನೆ ಹಾಗೂ ಬಿತ್ತನೆ ಬಳಿಕ ತೇವಾಂಶದ ಕೊರತೆಯಿಂದ ಫಸಲು ಕಟ್ಟುತ್ತಿಲ್ಲ. ಗಿಡಗಳು ಇಷ್ಟೊತ್ತಿಗೆ ಒಂದರಿಂದ ಒಂದುವರೆ ಮೀಟರ್ ಬೆಳೆದು ಫಸಲು ಕಟ್ಟಾಬೇಕಾಗಿತ್ತು. ಆದರೆ, ಕೇವಲ ಒಂದು ಅಡಿ ಬೆಳೆದಿದೆ. ಇದೇ ಟಿಎಸ್3ಆರ್ ತಳಿಯ ತೊಗರಿ ಗಿಡಗಳು, ಸೇಡಂನಲ್ಲಿ ಒಂದುವರೆ ಮೀಟರ್‍ನಷ್ಟು ಬೆಳೆದಿರುವುದನ್ನು ಪ್ರಾತ್ಯಕ್ಷಿಕೆ ಮೂಲಕ  ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಿತೇಂದ್ರನಾಥ್ ಸುಗೂರು ಅವರು ವಿವರಿಸಿದರು.

ಉನ್ನತ ಅಧಿಕಾರಿಗಳ ಸಭೆ: ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬೆಳೆ ನಾಶ ಕುರಿತಂತೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದಾಗಿ ಅವರು ಭರವಸೆ ನೀಡಿದರು.

ಬಳಿಕ, ಗಬ್ಬೂರ (ಬಿ) ಗ್ರಾಮದ ಮೊಹಮದ್ ಹುಸೇನಿ ಮೌಲಾ ಸಾಬ್ ಮಕದಮ್ ಅವರ ಹೊಲದಲ್ಲಿ ಉದ್ದು ಬೆಳೆಯನ್ನು ವೀಕ್ಷಿಸಿದರು. ಟಿಎಯು-1 ತಳಿಯ ಈ ಉದ್ದು ಬೆಳೆ ಕೂಡ ತೇವಾಂಶ ಇಲ್ಲದೆ ಹೂ ಬಿಡುವ ಹಂತದಲ್ಲಿ ನಾಶವಾಗಿದೆ. ಸರಿಯಾಗಿ ಬೆಳೆ ಬಂದರೆ, ಒಂದು ಗಿಡಕ್ಕೆ 60 ರಿಂದ 70 ಕಾಯಿಗಳ ಕಟ್ಟಿ, 8 ರಿಂದ 10 ಬೀಜಗಳು ಇರಬೇಕು. ಆದರೆ, ಹೂ ಬಿಡುವ ಮುನ್ನ 8 ರಿಂದ 10 ದಿನಗಳ ಕಾಲ ನೀರಿಲ್ಲದೆ,  ಇರುವುದರಿಂದ ಕೇವಲ ನಾಲ್ಕೈದು ಬೀಜಗಳು ಇವೆ ಎಂದು ಕೃಷಿ ಅಧಿಕಾರಿಗಳು ವಿವರಿಸಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments