Select Your Language

Notifications

webdunia
webdunia
webdunia
webdunia

ರೈತರ ವಿರುದ್ಧ ಕ್ರಿಮಿನಲ್ ಕೇಸ್: ಡಿಕೆಶಿ ಎಚ್ಚರಿಕೆಗೆ ಕೋಡಿಹಳ್ಳಿ ಖಂಡನೆ

ರೈತರ ವಿರುದ್ಧ ಕ್ರಿಮಿನಲ್ ಕೇಸ್: ಡಿಕೆಶಿ ಎಚ್ಚರಿಕೆಗೆ ಕೋಡಿಹಳ್ಳಿ ಖಂಡನೆ
ಬೆಂಗಳೂರು , ಮಂಗಳವಾರ, 30 ಸೆಪ್ಟಂಬರ್ 2014 (19:20 IST)
ಅಕ್ರಮ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರೈತರ ವಿರುದ್ಧ ಕ್ರಿಮಿನಲ್  ಕೇಸ್ ಹಾಕುವುದಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೀಡಿದ ಎಚ್ಚರಿಕೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಖಂಡಿಸಿದ್ದಾರೆ.

ರೈತರು ಯಾರೂ ಅಕ್ರಮ ಮಾಡಿಲ್ಲ. ಇದನ್ನು ಅಕ್ರಮ ಕಾನೂನು ಕೆಳಗೆ ತಂದರೆ ನಾವು ಸುಮ್ಮನಿರೋದಿಲ್ಲ. ಸಚಿವರು ತಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಇಲ್ಲದಿದ್ದರೆ ಸಚಿವರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು. 
 
ಡಿ.ಕೆ. ಶಿವಕುಮಾರ್ ಅವರು ಇಂತಹ ಮಾತುಗಳನ್ನು ಬಂದ್ ಮಾಡಬೇಕು ಎಂದೂ ಕೋಡಿಹಳ್ಳಿ ಹೇಳಿದ್ದಾರೆ. ಎಷ್ಟೋ ಮಂದಿ  ರೈತರು ಸಾಲ ಸೋಲ ಮಾಡಿ ಬೆಳೆ ಬೆಳೆದರೂ ಬ್ಯಾಂಕಿನ ಸಾಲ ತೀರಿಸಲು ಆಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ದರಿಂದ ರೈತರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಕೋಡಿಹಳ್ಳಿ ಒತ್ತಾಯಿಸಿದರು. 
.

Share this Story:

Follow Webdunia kannada