ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವ ವೇಳೆ ಗಾಯಗೊಂಡವರ ಸಂಖ್ಯೆ 90 ದಾಟಿದೆ. ಅವರಲ್ಲಿ ಮೂವರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿನ ಶ್ರೀನಗರದ ಭುವನಾ (8), ಕೋಲಾರದ ಮಡೇರಹಳ್ಳಿಯ ಮೋಹಿತ್ (9) ಮತ್ತು ಚಿತ್ತೂರಿನ ಆನಂದ್ (14) ಎಂದು ಗುರುತಿಸಲಾಗಿದೆ. ಮೂವರನ್ನು ಮಿಂಟೊ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪ ಸ್ವಲ್ಪ ಗಾಯಗೊಂಡವರು ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ 30, ಮಿಂಟೊ ಆಸ್ಪತ್ರೆಯಲ್ಲಿ 23, ಶಂಕರ ಆಸ್ಪತ್ರೆಯಲ್ಲಿ 16, ವಿಜಯಾ ನೇತ್ರಾಲಯದಲ್ಲಿ 8, ನೇತ್ರಧಾಮದಲ್ಲಿ 2, ಸಂಪ್ರತಿ ಕಣ್ಣಿನ ಆಸ್ಪತ್ರೆಯಲ್ಲಿ 5 ಮತ್ತು ಬೆಂಗಳೂರು ನೇತ್ರಾಲಯ ಆಸ್ಪತ್ರೆ 4 ಮತ್ತು ನೇತ್ರಧಾಮದಲ್ಲಿ ಇಬ್ಬರು ಚಿಕಿತ್ಸೆ ಪಡೆದಿದ್ದಾರೆ.