Webdunia - Bharat's app for daily news and videos

Install App

ಮಲೆಮಹದೇಶ್ವರದಲ್ಲಿ ಕಸಾಯಿಖಾನೆಗೆ ಸೇರುತ್ತಿರುವ ಹರಕೆಯ ಗೋವುಗಳು

Webdunia
ಮಂಗಳವಾರ, 24 ನವೆಂಬರ್ 2015 (11:43 IST)
ಶ್ರೀಕ್ಷೇತ್ರ ಮಲೆಮಹದೇಶ್ವರ ಕ್ಷೇತ್ರದಲ್ಲಿ  ಭಕ್ತರು ನೀಡುವ ಗೋವುಗಳನ್ನು ಹರಾಜು ಹಾಕುತ್ತಿರುವ ಶಾಕಿಂಗ್ ಸುದ್ದಿ ಭಕ್ತರ ಕಿವಿಗೆ ಬಿದ್ದಿದ್ದು, ಈ  ಪ್ರಕ್ರಿಯೆಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿ ಕೋಟಿ ಆದಾಯವಿರುವ ಶ್ರೀಕ್ಷೇತ್ರದಲ್ಲಿ ಭಕ್ತರಿಂದ ಹರಕೆಯ ರೂಪದಲ್ಲಿ ಬಂದ ಗೋವುಗಳನ್ನು ಹರಾಜು ಹಾಕಿದ ಬಳಿಕ ಕಸಾಯಿಖಾನೆಗೆ ಕಳಿಸಲಾಗುತ್ತಿತ್ತು. ಟಿವಿ ಚಾನೆಲ್‌ವೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಷಯ ಬಯಲಾಗಿದೆ.

 
ತಾವು ನೀಡುತ್ತಿರುವ ಹಸುಗಳ ದೇವರ ಸನ್ನಿಧಿಯಲ್ಲಿರುತ್ತದೆಂದು ಭಾವಿಸಿದ್ದ ಭಕ್ತರಿಗೆ ಗೋವುಗಳನ್ನು ಕಸಾಯಿಖಾನೆಗೆ ಕಳಿಸುವ ಸಂಗತಿ ಆಘಾತಕಾರಿಯಾಗಿದೆ.  ಚಾಮರಾಜನಗರದಲ್ಲಿ ನೂರಾರು ಭಕ್ತರು ಈ ಕುರಿತು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದು ಭಕ್ತರ ಧಾರ್ಮಿಕ, ಆಚಾರ ವಿಚಾರಗಳಿಗೆ ಹಾನಿಯಾಗುವ ವಿಚಾರವಾಗಿದ್ದು, ಗೋವುಗಳ ಹರಾಜು ನಿಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ತಾವು ದಾನವಾಗಿ ನೀಡುವ , ಪ್ರೀತಿಯಿಂದ ಸಾಕಿದ ಗೋವುಗಳು ಕಸಾಯಿಖಾನೆಗೆ ಸೇರುತ್ತಿರುವುದು ತಮಗೆ ತೀವ್ರ ನೋವುಂಟುಮಾಡುವ ಸಂಗತಿಯಾಗಿದೆ ಎಂದು ಭಕ್ತರು ಪ್ರತಿಕ್ರಿಯಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments