Webdunia - Bharat's app for daily news and videos

Install App

ಕಲಾಸಿಪಾಳ್ಯ ಮಾರ್ಕೆಟ್ ನಲ್ಲಿ ರೌಡಿಗಳ ದರ್ಬಾರು

Webdunia
ಶನಿವಾರ, 24 ಜೂನ್ 2023 (19:35 IST)
ಬೆಂಗಳೂರಿನ ಪ್ರಮುಖ ತರಕಾರಿ,ಹಣ್ಣು,ಹೂಗಳ ಮಾರಟ ಸ್ಥಳ.ಮೂಲೆ ಮೂಲೆಗಳಿಂದ ಕಲಾಸಿಪಾಳ್ಯ ಮಾರ್ಕೆಟ್ ಗೆ ರೈತರ ಬೆಳೆಗಳು ಬಂದು ಮಾರಾಟವಾಗುತ್ತೆ.ಆದ್ರೆ ಶ್ರಮಜೀವಿ ರೈತರ ಮೇಲೆ ರೌಡಿಗಳು ತಮ್ಮ ಧರ್ಪ ತೋರಿಸ್ತಿದ್ದಾರೆ. ಮಾರ್ಕೆಟ್ ಗೆ ರೈತರ ಬೇಳೆ ಲಾರಿಯಲ್ಲಿ ಎಂಟ್ರಿಯಾಗ್ಬೇಕು ಅಂದ್ರೆ ಈ ರೌಡಿ ಗ್ಯಾಂಗ್ ನ ಪರ್ಮಿಷನ್ ಬೇಕು.ಇಲ್ಲಿ ಇಡೀ ಮಾರ್ಕೆಟ್ ಅನ್ನು ತನ್ನ ಕಂಟ್ರೋಲ್ ನಲ್ಲಿ ಇಟ್ಕೊಂಡಿರೊ ರೌಡಿ ಅಂದ್ರೆ ಇದೇ ವೇಡಿಯಪ್ಪನ್. ಪ್ರತಿಯೊಂದು ವ್ಯವಹಾರಕ್ಕೂ ವೇಡಿ‌ ಗ್ಯಾಂಗ್ ಮೇಯ್ನ್.ಕೂಲಿ,ಹಮಾಲಿ,ಪಾರ್ಕಿಂಗ್ ಸೇರಿ ಎಲ್ಲದರಲ್ಲೂ ವೇಡಿ ಟೀಂ ನದ್ದೆ ಫೈನಲ್.ತರಕಾರಿ ಮೂಟೆ ಇಳಿಸಲು 10 ರೂ ಇದ್ದದ್ದು ಈಗ 15 ರೂ,ಟೊಮ್ಯಾಟೊ ಬಾಕ್ಸ್ ಇಳಿಸಲು 1 ರೂ ಇದ್ದದ್ದು ಈಗ 4 ರೂ,ಲಾರಿ ಪಾರ್ಕಿಂಗ್ ಗೆ 1500 ರೂ ಫಿಕ್ಸ್.ವೇಡಿ ಪಟಾಲಂ ನ ಸುಮಾರು 30 ಜನರ ಸುಮಾರು 14 ಟೀಂ ಮಾರ್ಕೆಟ್ ನಲ್ಲಿ ಕೆಲ್ಸ ಮಾಡುತ್ತೆ. ಪ್ರತಿ ದಿನ ವೇಡಿಗೆ ತಲುಪೋ ಕಲೆಕ್ಷನ್ ಮೂರರಿಂದ ಐದು ಲಕ್ಷ ರೂಪಾಯಿ. ಇದ್ರಿಂದ ರೈತರಿಗೆ ಸಮಸ್ಯೆಯಗ್ತಿದ್ದು,ಬರೋ ರೈತರ ಸಂಖ್ಯೆ ಕಡಿಮೆಯಾಗಿದೆ.ಹಾಗಾಗಿ ಮಾರ್ಕೆಟ್ ವೇಡಿಯಪ್ಪನ್ ಅಲಿಯಾಸ್ ವೇಡಿ ಸೇರಿ ಅವ್ರ ಟೀಂ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್  ಕಮಿಷನರ್ ಗೆ ದೂರು ನೀಡಲಾಗಿದೆ.ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಕಾರ್ಯದರ್ಶಿ,ಮಾಜಿ ಎಂ ಎಲ್ ಎ ಆರ್ ವಿ ದೇವರಾಜ್ ಕಮಿಷನರ್ ದಯಾನಂದ್ ರನ್ನ ಬೇಟಿಯಾಗಿ ದೂರು ಸಲ್ಲಿಸಿದ್ದಾರೆ.ಈಗಾಗಲೆ ದೂರನ್ನ ಡಿಸಿಪಿ ಲಕ್ಷ್ಮಣ್ ನಿಂಬರಿಗೆ ಗಮನಕ್ಕೆ ಕಮಿಷನರ್ ತಂದಿದ್ದು,ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಮುಂದಿನ ಸುದ್ದಿ
Show comments