Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರ ಅನಿವಾರ್ಯವಾದ್ರೂ ದೇಶಕ್ಕೆ ಮಾರಕ; ಜೆಡಿಎಸ್ ಮುಖಂಡ

ಭ್ರಷ್ಟಾಚಾರ ಅನಿವಾರ್ಯವಾದ್ರೂ ದೇಶಕ್ಕೆ ಮಾರಕ; ಜೆಡಿಎಸ್ ಮುಖಂಡ
ಬಾಗಲಕೋಟೆ , ಸೋಮವಾರ, 20 ಅಕ್ಟೋಬರ್ 2014 (14:21 IST)
ಭ್ರಷ್ಟಾಚಾರ ಇಂದಿನ ರಾಜಕಾರಣದಲ್ಲಿ ಅನಿವಾರ್ಯವಾಗಿದೆ ಎಂದು ವಿಧಾನಪರಿಷತ್‌ ಹಾಗೂ ತೋಟಗಾರಿಕೆ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಬಸವರಾಜ ಹೊರಟ್ಟಿ ವಿಷಾದಿಸಿದರು. 
 
ಇಲ್ಲಿನ ತೋಟಗಾರಿಕೆ ವಿವಿಯಲ್ಲಿ ನೂತನ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ರಾಜಕಾರಣದಲ್ಲಿ ಭ್ರಷ್ಟಾಚಾರ ಅನಿವಾರ್ಯ. ನಾನು ಕೂಡಾ ಚುನಾವಣೆ ಸಂದರ್ಭದಲ್ಲಿ ಶೇ.10ರಷ್ಟು ಭ್ರಷ್ಟನಾಗಿ ಕೆಲಸ ಮಾಡಿದ್ದೇನೆ. ಶಿಕ್ಷಕರಿಂದ ಎಂದಿಗೂ ಒಂದು ರೂಪಾಯಿ ಪಡೆದಿಲ್ಲ. 
 
ಇಂದಿನ ಕಲುಷಿತ ರಾಜಕಾರಣದಲ್ಲಿ ಉತ್ತಮರು ಸಿಗುವುದೇ ವಿರಳ. ಇದೆ ರೀತಿ ಸಾಗಿದರೆ ದೇಶಕ್ಕೆ ಮಾರಕವಾಗಲಿದೆ. ಒಳ್ಳೆಯವರು ರಾಜಕಾರಣಕ್ಕೆ ಬರಬೇಕಿದೆ ಎಂದರು. 

Share this Story:

Follow Webdunia kannada