Webdunia - Bharat's app for daily news and videos

Install App

ಕೊರೊನಾ ಭೀತಿ : ರೈತನ ಕೆಲಸಕ್ಕೆ ಸೆಲ್ಯೂಟ್ ಹೊಡೆದ ಪಿ ಎಸ್ ಐ

Webdunia
ಬುಧವಾರ, 25 ಮಾರ್ಚ್ 2020 (17:57 IST)
ಕೊರೊನಾ ವೈರಸ್ ಮುಂಜಾಗ್ರತೆಗೆ ರೈತನೊಬ್ಬ ಕೈಗೊಂಡಿರುವ ಕ್ರಮಕ್ಕೆ ಪಿಎಸ್ ಐ ಮೆಚ್ಚುಗೆ ವ್ಯಕ್ತಪಡಿಸಿ ಸೆಲ್ಯೂಟ್ ಹೊಡೆದಿದ್ದಾರೆ.

ಕಲಬುರಗಿ ಜಿಲ್ಲೆಯ ನಿಂಬರ್ಗಾ ವಲಯದ  ಹಿತ್ತಲ ಶಿರೂರ ಗ್ರಾಮದಲ್ಲಿ ರೈತರೊಬ್ಬರು ಕೊರೋನಾ ವೈರಸನಿಂದ ರಕ್ಷಣೆ ಪಡೆಯಲು ಎತ್ತಿನ ಬಂಡಿಯಲ್ಲಿ ಹೆಲ್ಮೆಟ್ ಧರಿಸಿದ್ದರು. ಇದನ್ನು ಕಂಡು ನಿಂಬರ್ಗಾ ಠಾಣೆಯ ಪಿಎಸ್‍ಐ ಸುರೇಶಕುಮಾರ ಚವ್ಹಾಣ ಅವರು ರೈತ ಲಕ್ಕಪ್ಪ ಕೊರಬಾ ಅವರಿಗೆ  ಸೆಲ್ಯೂಟ್ ನೀಡಿ ಗೌರವ ಸಲ್ಲಿಸಿದರು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲ ಶಿರೂರ ಗ್ರಾಮದಲ್ಲಿ ಕೊರೋನಾ ಶಂಕಿತನೊಬ್ಬ ಪುಣೆ ಆಸ್ಪತ್ರೆಯಿಂದ ಪರಾರಿಯಾಗಿ ಬಂದ ಘಟನೆ ಇತ್ತೀಚಿಗಷ್ಟೇ ಭಾರೀ ಸದ್ದು ಮಾಡಿತ್ತು. ಆದರೆ  ರೈತರೊಬ್ಬರು ಹೊಲದಿಂದ ಎತ್ತನಗಾಡಿಯಲ್ಲಿ ಬರುವಾಗ ಮುಖಕ್ಕೆ ಹೆಲ್ಮೆಟ್ ಧರಿಸಿಕೊಂಡು ಬರುತ್ತಿರುವುದನ್ನು ಕಂಡು ನಿಂಬರ್ಗಾ ಠಾಣೆಯ ಪಿಎಸ್‍ಐ ಸುರೇಶಕುಮಾರ ಚವ್ಹಾಣ ತಾವೇ ಸ್ವತಃ ನಿಂತು ರೈತ ಲಕ್ಕಪ್ಪ ಕೊರಬಾ ಅವರಿಗೆ  ಸೆಲ್ಯೂಟ್ ನೀಡಿ ಗೌರವ ಸಲ್ಲಿಸಿದರು.

ಶಾಲೆ ಕಲಿತ ಅಕ್ಷರಸ್ಥರಿಗೆ ಇರದೇ ಇರುವ ಜ್ಞಾನ ರೈತರೊಬ್ಬರಿಗೆ ಇರುವುದನ್ನು ಕಂಡು ಮೂಕವಿಸ್ಮಿತನಾದೆ. ಮಾತು ಬರದೇ ಆ ಮಹಾಶಯರಿಗೆ ಗೌರವ ಸಲ್ಲಿಸಿದೆ ಎಂದು ಹೇಳುತ್ತಾರೆ ಪಿಎಸ್‍ಐ ಸುರೇಶಕುಮಾರ ಚವ್ಹಾಣ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments