ಮಹಿಳಾ ಸಹೋದ್ಯೋಗಿ ಮೇಲೆ ಗುತ್ತಿಗೆ ನೌಕರನಿಂದ ಹಲ್ಲೆ

Webdunia
ಮಂಗಳವಾರ, 13 ಜೂನ್ 2017 (11:09 IST)
ರಾಯಚೂರು: ರಾಯಚೂರಿನ ಸಿಂಧನೂರು ನಗರ ಪಾಲಿಕೆಯಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿ ಮೇಲೆ ಸಹೋದ್ಯೋಗಿಯೊಬ್ಬರು ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
 
ಶರಣಪ್ಪ ಎಂಬವರು ನಸ್ರೀನ್ ಎಂಬುವವರಿಗೆ ತಡವಾಗಿ ಕಚೇರಿಗೆ ಕೆಲಸಕ್ಕೆ ಬಂದದ್ದಕ್ಕೆ ಹೊಡೆದಿದ್ದಾರೆ. ಸಿಂಧನೂರು ನಗರ ಪಾಲಿಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ನಸ್ರೀನ್, ರಂಜಾನ್ ತಿಂಗಳಾಗಿರುವುದರಿಂದ ಈಗ ಉಪವಾಸದಲ್ಲಿದ್ದಾರೆ. ರಂಜಾನ್ ಆಗಿದ್ದರಿಂದ ಬೆಳಗ್ಗೆ ಕೆಲಸಕ್ಕೆ ಬರುವುದು ತಡವಾಗಿತ್ತು. ಅಂದು ಶನಿವಾರವಾಗಿದ್ದರಿಂದ ಕಚೇರಿ ಕೆಲಸಗಳನ್ನು ಮುಗಿಸಲು ಕಡಿಮೆ ನೌಕರರು ಕಚೇರಿಯಲ್ಲಿದ್ದರು.  ಗುತ್ತಿಗೆ ಕೆಲಸ ಮಾಡುತ್ತಿರುವ ಕಂಪ್ಯೂಟರ್ ನಿರ್ವಾಹಕರಾಗಿರುವ ಶರಣಪ್ಪ ನಸ್ರೀನ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕೆಲ ನಿಮಿಷಗಳು ಕಳೆದ ನಂತರ ಆತ ನಸ್ರೀನ್ ರನ್ನು ಕಾಲಿನಿಂದ ಒದೆದಿದ್ದಾರೆ. ಇದು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
 
ಶರಣಪ್ಪನ ಕೃತ್ಯದಿಂದ ನೊಂದ ಮಹಿಳೆ ನಸ್ರೀನ್ ಪೊಲೀಸರಿಗೆ ದೂರು ನೀಡಿದ್ದಾರೆ.ನಂತರ ಶರಣಪ್ಪನನ್ನು ಕೆಲಸದಿಂದ ವಜಾ ಮಾಡಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಬುರುಡೆ ರಹಸ್ಯ: ಎಸ್‌ಐಟಿ ತನಿಖೆ ಬಗ್ಗೆ ಪರಮೇಶ್ವರ್ ಬಿಗ್ ಅಪ್ಡೇಟ್

ಮಂಗಳೂರು ದಸರಾ ಕೆಎಸ್‌ಆರ್‌ಟಿಸಿ ವಿಶೇಷ ಪ್ಯಾಕೇಜ್‌ ಟೂರ್‌ಗೆ ಭರ್ಜರಿ ರೆಸ್ಪಾನ್ಸ್‌, ಪ್ರವಾಸಿಗರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಸಚಿವ ಸಂಪುಟ ವಿಸ್ತರಣೆ: ಶಾಕಿಂಗ್ ಹೇಳಿಕೆ ಕೊಟ್ಟ ಗೃಹ ಸಚಿವ ಪರಮೇಶ್ವರ್

Karur Stampede: ಟಿವಿಕೆಯ ಇಬ್ಬರು ಕಾರ್ಯದರ್ಶಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಜನಸಾಗರ ನಿಯಂತ್ರಣ ಪೊಲೀಸರ ಜವಾಬ್ದಾರಿ, ಸ್ಟ್ಯಾಲಿನ್ ಸರ್ಕಾರಕ್ಕೆ ಟಿಎಂಕೆ ವಕೀಲ ಕೌಂಟರ್‌

ಮುಂದಿನ ಸುದ್ದಿ
Show comments