Select Your Language

Notifications

webdunia
webdunia
webdunia
webdunia

ಕಳ್ಳರು ಮೈತ್ರಿ ಮಾಡಿಕೊಂಡು ಉಪಚುನಾವಣೆ ಗೆದ್ದಿದ್ದಾರೆ: ಪ್ರತಾಪ್ ಸಿಂಗ್

ಕಳ್ಳರು ಮೈತ್ರಿ ಮಾಡಿಕೊಂಡು ಉಪಚುನಾವಣೆ ಗೆದ್ದಿದ್ದಾರೆ:  ಪ್ರತಾಪ್ ಸಿಂಗ್
ಮೈಸೂರು , ಮಂಗಳವಾರ, 26 ಆಗಸ್ಟ್ 2014 (16:56 IST)
ಜನರಿಂದ ತಿರಸ್ಕ್ರತವಾದ ಪಕ್ಷಗಳ ಕಳ್ಳರು ಮೈತ್ರಿ ಮಾಡಿಕೊಂಡು ಉಪಚುನಾವಣೆ ಗೆದ್ದಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಗ್ ಆರೋಪಿಸಿದ್ದಾರೆ.
 
ಬಿಜೆಪಿ ಪಕ್ಷದ ವಿರುದ್ಧ ಎಲ್ಲಾ ಪಕ್ಷಗಳು ಅನೈತಿಕವಾಗಿ ಒಂದಾಗಿ ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಎಲ್ಲಾ ಪಕ್ಷಗಳು ಒಂದಾದರೂ ಬಿಜೆಪಿಗೆ ಸಮವಾಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
ಕೇಂದ್ರದ ನರೇಂದ್ರ ಮೋದಿ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಜನತೆ ಇಂತಹ ಅಪವಿತ್ರ ಮೈತ್ರಿ ಮಾಡಿಕೊಂಡ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿನ್ಹಾ ತಿಳಿಸಿದ್ದಾರೆ.  

Share this Story:

Follow Webdunia kannada