Select Your Language

Notifications

webdunia
webdunia
webdunia
webdunia

ಅಡಳಿತ ಪಕ್ಷದವರು ಕುಡಿದು ಬಂದಿದ್ದಾರಾ?: ಕೆ.ಎಸ್ ಈಶ್ವರಪ್ಪ ಕಿಡಿ

ಅಡಳಿತ ಪಕ್ಷದವರು ಕುಡಿದು ಬಂದಿದ್ದಾರಾ?: ಕೆ.ಎಸ್ ಈಶ್ವರಪ್ಪ ಕಿಡಿ
ಬೆಂಗಳೂರು , ಮಂಗಳವಾರ, 1 ಮಾರ್ಚ್ 2016 (16:46 IST)
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚ್ ಬಗ್ಗೆ ಚರ್ಚೆಯಾಗುತ್ತಿದೆ. ವಾಚ್ ಬಗ್ಗೆ ಚರ್ಚಿಸಿ ಎಂದರೆ ಬೇರೇನೋ ಹೇಳುತ್ತಾರೆ. ಅಡಳಿತ ಪಕ್ಷದವರು ಕುಡಿದು ಬಂದಿದ್ದಾರಾ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
ನಾನು ರಾಜ್ಯದ ಪ್ರಜೆಯಾಗಿದ್ದರಿಂದ ಒತ್ತಾಯಿಸುತ್ತಿದ್ದೇನೆ. ಮುಖ್ಯಮಂತ್ರಿಗಳ 70 ಲಕ್ಷ ಮೌಲ್ಯದ ವಾಚ್ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ವಾಚ್ ವಿಷಯ ಕುರಿತಂತೆ ಸದನದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಸಿದ್ದ ಎಂದು ಘೋಷಿಸಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೈತಿಕತೆಯಿದ್ದರೆ ರಾಜೀನಾಮೆ ನೀಡುವಂತೆ ಈಶ್ವರಪ್ಪ ಒತ್ತಾಯಿಸಿದರು.
 
ಅಡಳಿತ ಪಕ್ಷದವರು ಕುಡಿದು ಬಂದಿದ್ದಾರೆ ಎನ್ನುವ ಹೇಳಿಕೆಯಿಂದ ಆಕ್ರೋಶಗೊಂಡ ಸಚಿವ ಅಭಯ್ ಚಂದ್ರ ಜೈನ್,ಈಶ್ವರಪ್ಪಗೆ ನಾಲಿಗೆ ಮೇಲೆ ಹಿಡಿತವಿಲ್ಲ, ಮನೆಯಲ್ಲಿ ಹಣ ಏಣಿಸೋ ಮಷಿನ್ ಇಟ್ಕೊಂಡು ಮುಖ್ಯಮಂತ್ರಿಯವರ ವಾಚ್ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ತಿರುಗೇಟು ನೀಡಿದರು.   

Share this Story:

Follow Webdunia kannada