Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕನಿಂದ ತರಾಟೆ

ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕನಿಂದ ತರಾಟೆ
ಮೈಸೂರು , ಶುಕ್ರವಾರ, 13 ನವೆಂಬರ್ 2015 (17:48 IST)
ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಕಾಂಗ್ರೆಸ್ ಶಾಸಕ ವೆಂಕಟೇಶ್ ಸಿಎಂ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
 
ಹಿಂದೆ ಶಿವಮೊಗ್ಗ ಜಿಲ್ಲೆಯನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿದೆ. ಒಮ್ಮೆ ಶಿವಮೊಗ್ಗೆ ಜಿಲ್ಲೆಗೆ ಹೋಗಿ ನೋಡಿಬನ್ನಿ ಎಂದು ಸಮಾರಂಭದಲ್ಲಿಯೇ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಸಚಿವರು ತಮ್ಮ ಸುತ್ತಲಿರುವ ಹೊಗಳುಭಟ್ಟರ ಕೆಲಸಗಳನ್ನು ಮಾತ್ರ ಮಾಡಿಕೊಳ್ಳುತ್ತಾರೆ, ಸಂಪೂರ್ಣ ರಾಜ್ಯದ ಅಭಿವೃದ್ಧಿ ಸಚಿವರಿಗೆ ಬೇಕಾಗಿಲ್ಲ. ಕೇವಲ ಸ್ವಹಿತಾಸಕ್ತಿಗಾಗಿ ಸಚಿವರಾಗಿದ್ದಾರೆ ಎಂದು ವೆಂಕಟೇಶ್ ಗುಡುಗಿದ್ದಾರೆ.
 
ಎಲ್ಲಾ ಸಿಎಂಗಳು ನಿಮ್ಮ ರೀತಿ ಜಿಪುಣತನ ಮಾಡುವುದಿಲ್ಲ. ನಿಮ್ಮ ಕೆಲಸ ಮಾಡದಿದ್ದರೆ ಅಭಿವೃದ್ಧಿ ಆಗೋಲ್ಲ. ಮುಂದೆ ಇವಕಾಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಪಿರಿಯಾಪಟ್ಟಣದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಅಗತ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯಗೆ ಶಾಸಕ ವೆಂಕಟೇಶ್ ಮನವಿ ಮಾಡಿದ್ದಾರೆ.
 
 ಶಾಸಕ ವೆಂಕಟೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ನಾನು ಮೈಸೂರಿಗೆ ಮಾತ್ರ ಸಿಎಂ ಅಲ್ಲ ರಾಜ್ಯದ ಸಿಎಂ. ರಾಜ್ಯ ಸಂಪೂರ್ಣವಾಗಿ ಅಭಿವೃದ್ಧಿಯಾಗಬೇಕು. ಪ್ರತಿಯೊಬ್ಬರಿಗೆ ವಿದ್ಯುತ್, ನೀರು ದೊರೆಯಬೇಕು ಎನ್ನುವುದು ಸರಕಾರದ ಸ್ಪಷ್ಟ ನಿಲುವಾಗಿದೆ ಎಂದರು.

Share this Story:

Follow Webdunia kannada