Select Your Language

Notifications

webdunia
webdunia
webdunia
webdunia

ಕೆರೆಗೆ ಹಾರಿದ ಕಾಂಗ್ರೆಸ್ ನಾಯಕನ ಪತ್ನಿ

ಕೆರೆಗೆ ಹಾರಿದ ಕಾಂಗ್ರೆಸ್ ನಾಯಕನ ಪತ್ನಿ
ಮಂಡ್ಯ , ಶನಿವಾರ, 25 ಜುಲೈ 2015 (09:32 IST)
ಕಳೆದೆರಡು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಮಂಡ್ಯ ಕಾಂಗ್ರೆಸ್ ಮುಖಂಡ ಕುಮಾರ್ ಸಾವಿನಿಂದ ಮನನೊಂದು ಅವರ ಪತ್ನಿ ಪುಷ್ಪಲತಾ ಕೆರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
 
ದೇವಿರಮ್ಮಣ್ಣಿ ಕೆರೆಯಲ್ಲಿ ಅವರ ಪುಷ್ಪಲತಾ (32) ಶವ ಪತ್ತೆಯಾಗಿದೆ. 
 
ಕಳೆದೆರಡು ದಿನಗಳ ಹಿಂದೆ ಕುಮಾರ್ ಮಾಣಿಕನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಮೇಲೆ ಗಾಯದ ಗುರುತುಗಳಿದ್ದು ಸಾವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ದೂರು ದಾಖಲಾಗಿತ್ತು. ಈ ಕುರಿತು ಪೊಲೀಸರು ತನಿಖೆಯನ್ನು ಕೈಗೊಂಡಿರುವಾಗಲೇ ಅವರ ಪತ್ನಿ ಸಹ  ಶವವಾಗಿ ಪತ್ತೆಯಾಗಿರುವುದು ಸಂಶಯದ ಹುತ್ತವನ್ನು ಬೆಳೆಸಿದೆ.
 
ಕೆ. ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada