Webdunia - Bharat's app for daily news and videos

Install App

ಬಿಜೆಪಿ ಶಾಸಕ ಸಿಟಿ ರವಿಗೆ ಕಾಂಗ್ರೆಸ್ ಮುಖಂಡ ಸಯೀದ್ ಅಹ್ಮದ್ ಚಾಲೆಂಜ್

Webdunia
ಶನಿವಾರ, 4 ಸೆಪ್ಟಂಬರ್ 2021 (18:58 IST)
ನಮ್ಮದೇಶದಲ್ಲಿ ಯಾವುದಾದರೊಂದು ಮದ್ರಸಾದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ತರಬೇತಿ ನೀಡಿದ್ದು ಸಾಬೀತಾದಲ್ಲಿ ಸಿಟಿ‌ ರವಿ ಏನು ಹೇಳುತ್ತಾರೋ, ಅದನ್ನು ಮಾಡಲು‌ ತಾನು ತಯಾರೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸಯೀದ್ ಅಹ್ಮದ್ ಚಾಲೆಂಜ್ ಮಾಡಿದ್ದಾರೆ.
ಮಂಗಳೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಚುನಾವಣೆ ಗೆಲ್ಲಬೇಕೆಂದರೆ ಹಿಂದೂ-ಮುಸ್ಲಿಂ ವಿಚಾರ, ಪಾಕಿಸ್ತಾನ-ಭಾರತ ವಿಚಾರ ಎತ್ತಬೇಕು. ಈಗ ತಾಲಿಬಾನ್ ವಿಚಾರವನ್ನು ಮುಂದಿಟ್ಟಿದ್ದಾರೆ. ಮದ್ರಸಾದಲ್ಲಿ ಕುರಾನ್ ಬೋಧನೆ ಮಾಡಲಾಗುತ್ತದೆ. ಕುರಾನ್ ಓದಿ ಅರ್ಥ ತಿಳಿದುಕೊಂಡವರು ಯಾರೂ ಮದ್ರಸಾದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಲಿಕ್ಕಿಲ್ಲ.‌ ಈ ದೇಶದ ಬಾವುಟ ರಚಿಸಿದಾಕೆ ಓರ್ವ ಮುಸ್ಲಿಂ ಮಹಿಳೆ. ಆದರೆ ಬಿಜೆಪಿಗರು ಮುಸ್ಲಿಮರನ್ನು ತಾಲಿಬಾನಿಗಳೆಂದು ಹೇಳುತ್ತಾರೆ. ನಾಚಿಕೆಯಾಗಬೇಕು ಇವರಿಗೆ ಎಂದು ಕಿಡಿಕಾರಿದರು.
ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಗಳು  ಆ ರೀತಿ ಮಾಡಿದರೆ, ಭಾರತದ ಮುಸ್ಲಿಮರೇನು ಮಾಡಬೇಕು. ನಮಗೂ ಅದಕ್ಕೂ ಏನು ಸಂಬಂಧ. ಆದ್ದರಿಂದ ಈ ರೀತಿ ಮಾತನಾಡುತ್ತಿರುವ ಬಸವರಾಜ್ ಯತ್ನಾಳ್, ಸಿ.ಟಿ.ರವಿ ಮೇಲೆ ಪ್ರಕರಣ ದಾಖಲಾಗಲಿ. ಮುಂದಿನ‌ ಅಸಂಬ್ಲಿ ಚುನಾವಣೆಯಲ್ಲಿ ಯತ್ನಾಳನ್ನು ಯತ್ತಂಗಡಿ ಮಾಡಿಸುತ್ತೇವೆ. ಅವರು ಹೇಗೆ ಗೆಲ್ಲುತ್ತಾರೆ ಎಂಬುದನ್ನು ನೋಡುತ್ತೇವೆ ನಾವು. ಈ ದೇಶ ಉಳಿಯಬೇಕೆಂದರೆ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಒಂದಾಗಿ ಬದುಕಿದರೆ ಏನೂ ಸಮಸ್ಯೆ ಇರೋದಿಲ್ಲ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್ ಇಂಡಿಯಾ ವಿಮಾನದ ಬಾಲದಲ್ಲಿತ್ತು ಇನ್ನೊಂದು ಮೃತದೇಹ

Suhas Shetty Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಇಲ್ಲಿದೆ ಅಪ್ಡೇಟ್‌

Air India Flight Crash: ತನಿಖೆಗೆ ಇದೇ ಮಹತ್ವದ ಸಾಕ್ಷಿ

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

ಮುಂದಿನ ಸುದ್ದಿ
Show comments