Select Your Language

Notifications

webdunia
webdunia
webdunia
webdunia

ನನಗೆ ಸ್ಥಾನ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ; ಗೋಪಾಲಕೃಷ್ಣ

ನನಗೆ ಸ್ಥಾನ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ; ಗೋಪಾಲಕೃಷ್ಣ
ಮೊಳಕಾಲ್ಮುರು , ಗುರುವಾರ, 28 ಆಗಸ್ಟ್ 2014 (13:50 IST)
ಸಚಿವ ಸ್ಥಾನ ಅಥವಾ ವಿಧಾನಸಭಾಧ್ಯಕ್ಷ ಸ್ಥಾನದ ಆಕ್ಷಾಂಕಿ ನಾನಲ್ಲ’ ಎಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ನೂತನ ಶಾಸಕ ಎನ್‌.ವೈ.ಗೋಪಾಲಕೃಷ್ಣ ಹೇಳಿದರು. ಸ್ವಗ್ರಾಮ ತಾಲ್ಲೂಕಿನ ರಾಂಪುರಕ್ಕೆ ಆಗಮಿಸಿದ್ದ ಅವರು  ಸುದ್ದಿಗಾರರ ಜತೆ ಮಾತನಾಡಿದರು.
 
‘ನಾನು ಐದು ಬಾರಿ ಶಾಸಕನಾಗಿದ್ದೇನೆ, ಒಂದು ಸಾರಿ ವಿಧಾನಸಭೆ ಉಪಾಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ಸ್ಥಾನ ಪಡೆಯಲು ಯಾವುದೇ ಲಾಬಿ ನಡೆಸುವುದಿಲ್ಲ. ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದು ಸ್ಪಷ್ಟಪಡಿಸಿದರು. ‘ಕೆಲ ಮಾಧ್ಯಮಗಳಲ್ಲಿ ನನಗೆ ಸ್ಪೀಕರ್‌ ಸ್ಥಾನ ನೀಡಲಾಗುವುದು ಎಂದು ಬಂದಿರುವ ವರದಿ ಸತ್ಯಕ್ಕೆ ದೂರ’ ಎಂದು ಹೇಳಿದರು.

Share this Story:

Follow Webdunia kannada