Select Your Language

Notifications

webdunia
webdunia
webdunia
webdunia

ದೇವದುರ್ಗದಲ್ಲಿ ಕಾಂಗ್ರೆಸ್ ಹಣ ಹಂಚಿಕೆ ಮಾಡಿದ್ರೂ ಫಲ ನೀಡಲಿಲ್ಲ: ಶಿವನಗೌಡ ನಾಯಕ್

ದೇವದುರ್ಗದಲ್ಲಿ ಕಾಂಗ್ರೆಸ್ ಹಣ ಹಂಚಿಕೆ ಮಾಡಿದ್ರೂ ಫಲ ನೀಡಲಿಲ್ಲ:  ಶಿವನಗೌಡ ನಾಯಕ್
ದೇವದುರ್ಗ: , ಮಂಗಳವಾರ, 16 ಫೆಬ್ರವರಿ 2016 (13:57 IST)
ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಮಾಜಿ ಶಾಸಕ ದಿ.ವೆಂಕಟೇಶ್ ನಾಯಕ್ ಪುತ್ರ ರಾಜಶೇಖರ್ ನಾಯಕ್ ಅವರಿಗೆ ಸೋಲುಂಟಾಗಿದೆ.  ವೆಂಕಟೇಶ್ ನಾಯಕ್ ಅವರ ನಿಧನದಿಂದ ಪುತ್ರ ರಾಜಶೇಖರ್ ನಾಯಕ್ ಪರ ಅನುಕಂಪದ ಅಲೆ ಬೀಸಿದ ಹಾಗೆ ಕಂಡುಬಂದಿಲ್ಲ.   ಕಾಂಗ್ರೆಸ್ ಪಕ್ಷ  ದೇವದುರ್ಗದಲ್ಲಿ ಮರಳು ಮಾಫಿಯಾಗೆ ಕಡಿವಾಣ ಹಾಕಿತ್ತು. ಆದರೂ ಜನರ ತೀರ್ಪಿಗೆ ತಲೆಬಾಗುತ್ತೇನೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದು  ರಾಜಶೇಖರ ನಾಯಕ್ ಹೇಳಿದ್ದಾರೆ.
 
ಭರ್ಜರಿ ಜಯಗಳಿಸಿದ ಶಿವನಗೌಡ ನಾಯಕ್ ಗೆಲುವಿನ ಕುರಿತು ಪ್ರತಿಕ್ರಿಯಿಸಿ ರಾಜ್ಯದ ಮುಖಂಡರು ಪ್ರಚಾರ ಕೈಗೊಂಡಿದ್ದು ಮತ್ತು ನಾವು ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ನೋಡಿ ನನ್ನನ್ನು ಆಯ್ಕೆ ಮಾಡಿದರು. ಇದಲ್ಲದೇ ಕಾಂಗ್ರೆಸ್ ವಿರುದ್ಧ  ಗಂಭೀರ ಆರೋಪ ಮಾಡಿದ್ದು, ಕಾಂಗ್ರೆಸ್ ಮತದಾರರಿಗೆ 70 ಕೋಟಿ ರೂ. ಹಣ ಹಂಚಿಕೆ ಮಾಡಿದೆ.

ಪ್ರತಿ ಬೂತ್‌ಗೆ 15 ಲಕ್ಷ ರೂ. ಹಣವನ್ನು ಮತದಾರರಿಗೆ ಹಣ ಹಂಚಿದೆ. ಆದರೂ ಮತದಾರರು ಬಿಜೆಪಿ ಕಡೆ ಒಲವು ತೋರಿಸಿ ಗೆಲ್ಲಿಸಿದ್ದಾರೆ ಎಂದು ಹೇಳಿದರು. ಚುನಾವಣೆಯನ್ನು ಪ್ರತಿಷ್ಠೆಯನ್ನು ತೆಗೆದುಕೊಂಡು ಕಾಂಗ್ರೆಸ್ ಹಣದ ಹೊಳೆ ಹರಿಸಿತು. ಆದರೂ ಜನತೆ ಮತ ನೀಡಿ ತಮ್ಮನ್ನು ಆಶೀರ್ವದಿಸಿದ್ದು, ಅವರಿಗೆ ಚಿರಋಣಿಯಾಗಿರುವುದಾಗಿ ತಿಳಿಸಿದರು. 

Share this Story:

Follow Webdunia kannada