Webdunia - Bharat's app for daily news and videos

Install App

ಸಮರ್ಥ ನ್ಯಾಯವಾದಿಯನ್ನು ನೇಮಿಸಿ: ಶೆಟ್ಟರ್

Webdunia
ಭಾನುವಾರ, 2 ಅಕ್ಟೋಬರ್ 2016 (17:20 IST)
ಕಾವೇರಿ ವಿಷಯ ಕುರಿತು ಸಮರ್ಥವಾಗಿ ವಾದ ಮಂಡಿಸಲು ನ್ಯಾಯವಾದಿ ಫಾಲಿ ನಾರಿಮನ್ ಸಂಪೂರ್ಣವಾಗಿ ವಿಫಲರಾಗಿದ್ದು, ಅವರ ಬದಲಾಗಿ ಬೇರೊಬ್ಬ ಸಮರ್ಥ ನ್ಯಾಯವಾದಿಯನ್ನು ನೇಮಿಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಷಯದ ಕುರಿತು ರಾಜ್ಯಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇದೆ. ಕಾವೇರಿ ಜಲಾಶಯದಲ್ಲಿ ನೀರಿಲ್ಲ ಎನ್ನುವ ವಾಸ್ತವಾಂಶ ತಿಳಿದಿದ್ದರೂ ನಾರಿಮನ್, ಸೆ. 5ರಂದು ನಡೆದ ವಿಚಾರಣೆಯಲ್ಲಿ 10ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ನ್ಯಾಯಾಲಯಕ್ಕೆ ಅಂಡರ್ ಟೇಕಿಂಗ್ ನೀಡಿದ್ದಾರೆ. ಅಂದು ಅವರು ಕೈಗೊಂಡಿರುವ ಏಕಪಕ್ಷೀಯ ನಿರ್ಧಾರದಿಂದ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಎಂದರು.
 
ವಾದ ಮಾಡಲು ತಾನು ಅಸಮರ್ಥ ಎಂದು ಅರಿವಾದಾಗ ನ್ಯಾಯಾಲಯದಲ್ಲಿ ಇನ್ನು ಮುಂದೆ ವಾದ ಮಂಡಿಸಲಾರೆ ಎಂದು ಹೇಳುತ್ತಾರೆ. ಅವರನ್ನು ಮುಂದುವರಿಸಬೇಕೋ ಬೇಡವೋ ಎನ್ನುವ ವಿಷಯ ಕಕ್ಷಿದಾರನಾದ  ಸರಕಾರಕ್ಕೆ ಬಿಟ್ಟಿದ್ದು. ಆದರೆ, ಅದ್ಯಾವುದನ್ನು ಪರಿಗಣಿಸದೆ ನ್ಯಾಯಾಲಯದಲ್ಲಿ ಅವರು ಹಿಂದೆ ಸರಿಯುವ ವಿಷಯ ಪ್ರಸ್ತಾಪಿಸಿದ್ದು, ವೃತ್ತಿಪರತೆಗೆ ಮಾಡಿರುವ ದ್ರೋಹ. ಏನೇ ಇರಲಿ, ಈ ಕೂಡಲೇ ರಾಜ್ಯ ಸರಕಾರ ಸಮರ್ಥ ನ್ಯಾಯವಾದಿಯನ್ನು ನೇಮಕ ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದ ಶೆಟ್ಟರ್, ಅ. 6ರವರೆಗೆ ಪ್ರತಿದಿನ 6ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ನ್ಯಾಯಾಲಯ ಮತ್ತೆ ಆದೇಶಿಸಿದ ಹಿನ್ನೆಲೆಯಲ್ಲಿ ದಿ. 3ರಂದು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಇಂದಿನ ಅಡಿಕೆ, ಕಾಳುಮೆಣಸು ಮಾರುಕಟ್ಟೆ ದರ ಹೇಗಿದೆ ನೋಡಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸರ್ಕಾರಿ ನೌಕರರು, ಗುತ್ತಿಗೆದಾರರಿಗೆ ಗುಡ್ ನ್ಯೂಸ್: ಆರೋಗ್ಯ ಇಲಾಖೆಯಿಂದ ಭರ್ಜರಿ ಆಫರ್

ಪಾಕಿಸ್ತಾನವನ್ನು ನೈಸ್ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಗಿದೆ ಖತರ್ನಾಕ್ ಪ್ಲ್ಯಾನ್

Karnataka Weather: ಎರಡು ದಿನಗಳಿಗೆ ಹವಾಮಾನದಲ್ಲಿ ಆಗಲಿದೆ ಮಹತ್ವದ ಬದಲಾವಣೆ

ಮುಂದಿನ ಸುದ್ದಿ
Show comments