Select Your Language

Notifications

webdunia
webdunia
webdunia
webdunia

ಕಾಲೇಜು ಅಟೆಂಡರ್‌ನಿಂದ ವಿದ್ಯಾರ್ಥಿನಿಯ ಹತ್ಯೆ

ಕಾಲೇಜು ಅಟೆಂಡರ್‌ನಿಂದ ವಿದ್ಯಾರ್ಥಿನಿಯ ಹತ್ಯೆ
ಬೆಂಗಳೂರು , ಬುಧವಾರ, 1 ಏಪ್ರಿಲ್ 2015 (10:45 IST)
ವಿದ್ಯಾರ್ಥಿನಿಯೊಬ್ಬಳನ್ನು ಆಕೆ ಓದುತ್ತಿದ್ದ ಕಾಲೇಜು ಹಾಸ್ಟೆಲ್‌ನಲ್ಲೇ ಗುಂಡಿಕ್ಕಿ ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಗೌತಮಿ(18) ಎಂಬಾಕೆಯೇ ದುರ್ಮರಣಕ್ಕೆ ಈಡಾದ ಯುವತಿಯಾಗಿದ್ದಾಳೆ. ಆಕೆಯ ಕಾಲೇಜಿನಲ್ಲಿ ಅಟೆಂಡರ್ ಆಗಿರುವ ಮಹೇಶ್ (40) ಎಂಬಾತನೇ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಗೌತಮಿಯ ಸ್ನೇಹಿತೆಯ ಮೇಲೂ ಹಲ್ಲೆ ನಡೆಸಿರುವ ಆರೋಪಿ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.  

ಕಾಡುಗೋಡಿಯಲ್ಲಿರುವ ಪ್ರಗತಿ ಕಾಲೇಜು ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು ಹಾಸ್ಟೆಲ್‌ನ ಮೂರನೇ ಮಹಡಿಯಲ್ಲಿರುವ ಕೋಣೆಯೊಂದರಲ್ಲಿ ವಾಸವಾಗಿದ್ದ ಗೌತಮಿಯ ಕೋಣೆಗೆ ನಿನ್ನ ರಾತ್ರಿ ಏಕಾಯೇಕಿ ನುಗ್ಗಿದ್ದ ಮಹೇಶ್ ಗೌತಮಿ ತಲೆಗೆ ಮೇಲೆ ಗುಂಡು ಹಾರಿಸಿದ್ದಾನೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
 ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ಮತ್ತು ಗೃಹ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿದ್ದಾರೆ. ಘಟನೆಯ ಬಗ್ಗೆ ತೀವೃ ಖೇದ ವ್ಯಕ್ತ ಪಡಿಸಿರುವ ಸಚಿವರು ಹತ್ಯೆಗೆ ಕಾರಣ ತಿಳಿ ಬಂದಿಲ್ಲ ಎಂದಿದ್ದಾರೆ. 
 
ನಾಪತ್ತೆಯಾಗಿರುವ ಆರೋಪಿ ಮಹೇಶ್ ಪತ್ತೆಗಾಗಿ  ಮೂರು ವಿಶೇಷ ತಂಡ ರಚನೆ  ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ತಿಳಿಸಿದ್ದಾರೆ. 

Share this Story:

Follow Webdunia kannada