Select Your Language

Notifications

webdunia
webdunia
webdunia
webdunia

ರಾಜ್ಯದ ಜನತೆಗೆ ಯುಗಾದಿ ಶುಭಾಷಯ ಕೋರಿದ ಸಿಎಂ

ರಾಜ್ಯದ ಜನತೆಗೆ ಯುಗಾದಿ ಶುಭಾಷಯ ಕೋರಿದ ಸಿಎಂ
ಬೆಂಗಳೂರು , ಬುಧವಾರ, 29 ಮಾರ್ಚ್ 2017 (12:56 IST)
ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಯುಗಾದಿ ಹಬ್ಬದ ಶುಭಾಷಯ ಕೋರಿದ್ದಾರೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಅಧಿಕೃತ ನಿವಾಸವಾದ ಕಾವೇರಿಯಲ್ಲಿ, ಯುಗಾದಿ ಹಬ್ಬದ ಶುಭಕೋರಲೆಂದು ಬಂದವರಿಗೆ ಸಿಹಿ ಹಂಚಿದರು. 
 
ನಮಗೆ ಯುಗಾದಿ ಹಬ್ಬದಿಂದ ಹೊಸ ವರ್ಷ ಆರಂಭವಾಗುತ್ತದೆ. ಜೀವನದಲ್ಲಿ ಸುಖ ದುಖ ಸಮನಾಗಿ ಇರಲಿ. ಹೀಗಾಗಿಯೇ ಇಂದು ಬೇವು ಬೆಲ್ಲವನ್ನು ಸವಿಯುತ್ತೇವೆ ಎಂದರು. 
 
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಬರಗಾಲವಿದೆ. ಈ ಬಾರಿ ಅದು ಕೊನೆಯಾಗಲಿ. ಯುಗಾದಿ ಹಬ್ಬ ಎಲ್ಲರ ಮುಖದಲ್ಲಿ ನಗೆಮೂಡಲಿ ಎಂದು ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಶುಭಕೋರಿದ್ದಾರೆ.   
 
  ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಅಗತ್ಯವಿದ್ದರೆ ಬಾಗಿಲಿಗೇ ಬನ್ನಿ! ಪ್ರಧಾನಿ ಮೋದಿಗೆ ಶಿವಸೇನೆ