Webdunia - Bharat's app for daily news and videos

Install App

ನಿಮಗೆ ಖಾತ್ರಿಯಿಲ್ವಾ ನಾನು ತಪ್ಪು ಮಾಡಿಲ್ಲಾಂತ: ಜನರಿಗೆ ಪ್ರಶ್ನೆ ಮಾಡಿದ ಸಿದ್ದರಾಮಯ್ಯ

Krishnaveni K
ಮಂಗಳವಾರ, 5 ನವೆಂಬರ್ 2024 (20:17 IST)
ಶಿಗ್ಗಾಂವಿ: ಮುಡಾ ಹಗರಣದಲ್ಲಿ ತಮ್ಮ ಮೇಲೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿರುವ ಸಿಎಂ ಸಿದ್ದರಾಮಯ್ಯ, ನಾನೇನು ತಪ್ಪು ಮಾಡಿದ್ದೀನಿ ಅಂತ ಪೊಲೀಸರ ಹತ್ರ ಹೋಗಬೇಕು ಎಂದು ಹೇಳಿದ್ದಾರೆ.

ಶಿಗ್ಗಾಂವಿ ಉಪಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿವರ ಪುತ್ರ ಸೋಲೋದು ನೂರು ಶೇಖಡಾ ಖಚಿತ. ಈ ಬಾರಿ ನಾವು ಮೂರೂ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು. ಯಾಕೆಂದರೆ ಬಿಜೆಪಿಯವರು ಮಹಾನ್ ಸುಳ್ಳುಗಾರರು, ನನ್ನ ಮೇಲೇ ಸುಳ್ಳು ಕೇಸ್ ಹಾಕಿದ್ದಾರೆ.

ಈಗ ನಾನು ನಾಳೆ ಲೋಕಾಯುಕ್ತ ಪೊಲೀಸ್ ಎದುರು ವಿಚಾರಣೆಗೆ ಹೋಗಬೇಕು. ಎಂಥಾ ಪರಿಸ್ಥಿತಿ ಬಂತು ನೋಡಿ, ಒಂದು ಸುಳ್ಳು ಕೇಸ್ ನ ವಿಚಾರಣೆಗೆ ನಾನು ಪೊಲೀಸರ ಬಳಿ ಹೋಗಬೇಕಿದೆ. ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಅದಕ್ಕಾಗಿಯಾದರೂ ನೀವು ಈ ಸಲ ಬಿಜೆಪಿಯನ್ನು ಸೋಲಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಬಳಿಕ ಜನರತ್ತ ತಿರುಗಿ, ನಿಮಗೆ ಖಾತ್ರಿಯಿದೆಯಲ್ವಾ ನಾನು ತಪ್ಪು ಮಾಡಿಲ್ಲಾಂತ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಲ್ಲಿದ್ದ ಕೆಲವರು ಹೌದು ತಪ್ಪು ಮಾಡಿಲ್ಲ ಎಂದಿದ್ದಾರೆ. ನೋಡಿ ಇದಕ್ಕಾಗಿ ನೀವು 13 ನೇ ತಾರೀಖು ಮತಗಟ್ಟೆಗೆ ಹೋಗಿ ಪಠಾಣ್ ಹೆಸರಿನ ಮುಂದೆ ಗುಂಡಿ ಒತ್ತಿ ನಿಮ್ಮ ಮತ ಹಾಕಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೆಟ್ರೊ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್‌: ಮೆಟ್ರೊ ಮಾರ್ಗಗಳಲ್ಲಿ ಸಿಗಲಿದೆ ವೈಫೈ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತಿ ಮನೆಗೆ ಉಚಿತ ವಿದ್ಯುತ್ ಘೋಷಿಸಿದ ಬಿಹಾರ ಸಿಎಂ ನಿತೀಶ್‌

ಭಾರೀ ಮಳೆಗೆ ದಕ್ಷಿಣ ಕನ್ನಡದ ಹಲವೆಡೆ ಭೂಕುಸಿತ: ಬೆಂಗಳೂರು–ಮಂಗಳೂರು ಹೆದ್ದಾರಿ ಸಂಪರ್ಕ ಕಡಿತ

ರಸ್ತೆ ನಿರ್ಮಿಸಲು ಮೋದಿಗೆ ಪತ್ರ ಬರೆದ ಬಾಲಕಿ: ಕಾಂಗ್ರೆಸ್ ಕೈಲಿ ಅದೂ ಆಗಲ್ವಾ ಎಂದು ಬಿಜೆಪಿ ಟೀಕೆ

ವಿರಾಟ್ ಕೊಹ್ಲಿ ವಿಡಿಯೋ ತೋರಿಸಿ ಚಿನ್ನಸ್ವಾಮಿ ದುರಂತಕ್ಕೆ ಆರ್ ಸಿಬಿಯೇ ಕಾರಣ ಎಂದ ಸರ್ಕಾರ

ಮುಂದಿನ ಸುದ್ದಿ
Show comments