Select Your Language

Notifications

webdunia
webdunia
webdunia
webdunia

ಒಂದೇ ವೇದಿಕೆಗೆ ಬನ್ನಿ ಸ್ವಾಮಿ: ಸಿಎಂ ಅವರಿಗೆ ಬಿಎಸ್‌ವೈ ಆಹ್ವಾನ

ಒಂದೇ ವೇದಿಕೆಗೆ ಬನ್ನಿ ಸ್ವಾಮಿ: ಸಿಎಂ ಅವರಿಗೆ ಬಿಎಸ್‌ವೈ ಆಹ್ವಾನ
ಬಳ್ಳಾರಿ , ಗುರುವಾರ, 1 ಅಕ್ಟೋಬರ್ 2015 (17:31 IST)
ರಾಜ್ಯ ಬಿಜೆಪಿ ಪಕ್ಷದ ವತಿಯಿಂದ ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ರೈತ ಚೈತನ್ಯ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಾವು ನೀವು ಒಂದೇ ವೇದಿಕೆ ಮೇಲೆ ಸೇರೋಣ ಸ್ವಾಮಿ, ನಿಮಗೆ ವಾದ ಹೆರಿಸಲು ತಾಕತ್ತಿದ್ದರೆ ಒಂದೇ ವೇದಿಕೆ ಬನ್ನಿ ಎಂದು ಸವಾಲೆಸೆದಿದ್ದಾರೆ.  
 
ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ರೈತರ ಸಮಸ್ಯೆಗಲಿಗೆ ಸ್ಪಂಧಿಸುತ್ತಿಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದ ಅವರು, ಮೊದಲು ರೈತರ ಸಾಲವನ್ನು ಮನ್ನಾ ಮಾಡಿ ಎಂದು ಆಗ್ರಹಿಸಿದರು. 
 
ಇದೇ ವೇಳೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ರೈತರ ಪರವಾದ ಯಶಸ್ವಿ ಯೋಜನೆಗಳು ಜಾರಿಯಾಗಿದ್ದವು. ಅಲ್ಲದೆ ಅವು ಎಲ್ಲಾ ವರ್ಗಕ್ಕೂ ಕೂಡ ಹಂಚಿಕೆಯಾಗಿದ್ದವು. ಆದರೆ ಪ್ರಸ್ತುತವಿರುವ ಕಾಂಗ್ರೆಸ್ ಸರ್ಕಾರವು ಕೇವಲ ಕೆಲ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಯೋಜನೆಗಳು ಯಶಸ್ವಿಯಾಗಿಲ್ಲ ಎಂದು ಟೀಕಿಸಿದ ಅವರು, ಬನ್ನಿ ನಾವೂ ನೀವೆಲ್ಲರೂ ಒಂದೇ ವೇದಿಕೆ ಮೇಲೆ ಬರೋಣ, ನಾವು ನಮ್ಮ ಐದು ವರ್ಷಗಳ ಸಾಧನೆಯನ್ನು ತೋರಿಸುತ್ತೇವೆ, ನೀವು ನಿಮ್ಮ ಸಾಧನೆಗಳನ್ನು ಸಾಬೀತುಪಡಿಸಿ ಎಂದು ಸವಾಲೆಸೆದಿದ್ದಾರೆ. 
 
ಬಳಿಕ, ಜಾತಿ-ಜಾತಿಗಳ ನಡುವೆ ವಿಷದ ಬೀಜ ಬಿತ್ತುತ್ತಾ ಸಮಾಜಕ್ಕೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

Share this Story:

Follow Webdunia kannada