Webdunia - Bharat's app for daily news and videos

Install App

ತಂದೆ ಅಪಹರಿಸಿದಾಗ ಸಿಎಂ ಆಗಿದ್ದ ಎಸ್‌.ಎಂ.ಕೃಷ್ಣ ಮಾಡಿದ ಸಹಾಯ ಅಪಾರ: ನಟ ಶಿವರಾಜ್‌ ಕುಮಾರ್

Sampriya
ಮಂಗಳವಾರ, 10 ಡಿಸೆಂಬರ್ 2024 (14:30 IST)
Photo Courtesy X
ಬೆಂಗಳೂರು:  ನಮ್ಮ ತಂದೆಯವರನ್ನು ವೀರಪ್ಪನ್ ಅಪಹರಿಸಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಮಾಡಿದ್ದ ಸಹಾಯವನ್ನು ಎಂದೂ ಮರೆಯಲು ಸಾಧ್ಯ ಇಲ್ಲ ಎಂದು ಎಂದು ನಟ ಶಿವರಾಜ್ ಕುಮಾರ್‌ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.30 ರ ಸುಮಾರಿಗೆ ನಿಧನರಾದರು. ಸದಾಶಿವನಗರದ ಎಸ್.ಎಂ. ಕೃಷ್ಣ ಅವರ ಮನೆಯಂಗಳದಲ್ಲಿ ರಾಜಕಾರಣಿಗಳು, ಚಿತ್ರರಂಗದ ಕಲಾವಿದರು ಕೃಷ್ಣ ಅವರ ಅಂತಿಮ ದರ್ಶನ ಪಡೆದರು.

ಮಂಗಳವಾರ ಮುಂಜಾನೆಯಿಂದಲೂ ಕೃಷ್ಣ ಅವರ ನಿವಾಸಕ್ಕೆ ಜನರು ಬರತೊಡಗಿದ್ದರು. ಸದಾಶಿವನಗರ, ಮಲ್ಲೇಶ್ವರದ ಸುತ್ತಮುತ್ತಲ ನಿವಾಸಿಗಳು ಅಂತಿಮ ದರ್ಶನ ಪಡೆದರು. ನಟಿ ರಮ್ಯಾ ಅವರು ಬೆಳಿಗ್ಗೆಯೇ ದರ್ಶನ ಪಡೆದರು. ಪಕ್ಕದ ನಿವಾಸಿಗಳಾದ ಅಶ್ವಿನಿ ಪುನೀತ್ ರಾಜಕುಮಾರ್, ಯುವ ರಾಜಕುಮಾರ ಬಂದು ಅಂತಿಮ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ, ನಮ್ಮ ಕುಟುಂಬಕ್ಕೆ ಕೃಷ್ಣ ಅವರು ತುಂಬಾ ಹತ್ತಿರದವರಾಗಿದ್ದರು. ಅತ್ಯಾಧುನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ವೀರಪ್ಪನ್ ನಮ್ಮ ತಂದೆಯವರನ್ನು ಅಪಹರಿಸಿದ್ದಾಗ ಅವರು ಮಾಡಿದ್ದ ಸಹಾಯವನ್ನು ಮರೆಯಲು ಸಾಧ್ಯ ಇಲ್ಲ ಎಂದರು.

ಅವರಿಗೆ ವಯಸ್ಸು ಎಷ್ಟೇ ಆಗಿದ್ದರೂ ನಷ್ಟ ನಷ್ಟವೇ. ಅದನ್ನು ಭರಿಸಲು ಸಾಧ್ಯ ಇಲ್ಲ. 92 ವರ್ಷದ ಅವರ ಜೀವನ ಸಾರ್ಥಕವಾಗಿದೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾಥಿಸುತ್ತೇನೆ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕದ ಟ್ಯಾಕ್ಸಿ ಚಾಲಕರಿಗೆ ಹೊಸ ಭರವಸೆ

ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ: ವಿಜಯೇಂದ್ರ

ಧರ್ಮಸ್ಥಳ ಬುರುಡೆ ರಹಸ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಣ್ಣಾಮಲೈ ಕಿಡಿ

ಸಿಎಂ ಸಿದ್ದರಾಮಯ್ಯ ಅಂದು ಕಾಮನ್‌ಸೆನ್ಸ್‌ ಯೂಸ್ ಮಾಡ್ತಿದ್ರೆ, ಈ ಪರಿಸ್ಥಿತಿಯಲ್ಲ: ಆರ್‌ ಅಶೋಕ್‌

ಹೊಸ ದಿಕ್ಕಿನತ್ತ ತನಿಖೆ, ಶಿವತಾಂಡವದ ಫೋಟೋ ಹಂಚಿಕೊಂಡ ಧರ್ಮಸ್ಥಳ

ಮುಂದಿನ ಸುದ್ದಿ
Show comments