Select Your Language

Notifications

webdunia
webdunia
webdunia
webdunia

ಸಿಎಂ ಸಭೆಯ ಪೆಂಡಾಲ್ ಕುಸಿತ: ಸಾರ್ವಜನಿಕರ ಓಟ

ಸಿಎಂ ಸಭೆಯ ಪೆಂಡಾಲ್ ಕುಸಿತ: ಸಾರ್ವಜನಿಕರ ಓಟ
ಚಿಕ್ಕಬಳ್ಳಾಪುರ , ಶನಿವಾರ, 28 ಮಾರ್ಚ್ 2015 (18:29 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾತನಾಡುತ್ತಿದ್ದ ವೇಳೆ ಸಾರ್ವಜನಿಕರು ಕುಳಿತುಕೊಳ್ಳಲೆಂದು ಹಾಕಿದ್ದ ಪೆಂಡಾಲ್ ಗಾಳಿಗೆ ಸಿಲುಕಿ ಬಿದ್ದ ಘಟನೆ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.  
 
ಇಲ್ಲಿನ ವಿವಿಧ ಕಾಮಗಾರಿಗಳ ಪರಿಶೀಲನೆಗೆಂದು ಮುಖ್ಯಮಂತ್ರಿಗಳು ನಗರಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಷಣ ಮಾಡುತ್ತಿದ್ದ ವೇಳೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲೆಂದು ಅಳವಡಿಸಲಾಗಿದ್ದ ಪೆಂಡಾಲ್ ಬಿರುಗಾಳಿಗೆ ಸಿಲುಕಿದ ಪರಿಣಾಮ ನೆಲಕ್ಕೆ ಬೀಳುತ್ತಿತ್ತು. ಬಳಿಕ, ಸಾರ್ವಜನಿಕರು ಸಭೆಯಿಂದ ಕಾಲ್ಕಿತ್ತು ಓಡಲೆತ್ನಿಸಿದರು. ಅದೇ ಸಂಧರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರೇ ಏನೂ ಆಗುವುದಿಲ್ಲ ಕುಳಿತುಕೊಳ್ಳಿ, ಕುಳಿತುಕೊಳ್ಳಿ ಎಂದು ಸಾಂತ್ವನ ಹೇಳಿದರು.   
 
ಘಟನೆ ಹಿನ್ನೆಲೆ ಕಾರ್ಯಕ್ರಮ ಮೇಲ್ವಿಚಾರಕರು ಎಚ್ಚೆತ್ತುಕೊಂಡು ಪೆಂಡಾಲನ್ನು ಮತ್ತೆ ಭದ್ರಗೊಳಿಸಿದರು. ಬಳಿಕ ಕಾರ್ಯಕ್ರಮವು ಯಥಾವತ್ತಾಗಿ ಮುಂದುವರಿಯಿತು.

Share this Story:

Follow Webdunia kannada