Select Your Language

Notifications

webdunia
webdunia
webdunia
webdunia

ವಾಜುಭಾಯಿ ವಾಲಾ ನೇಮಕಕ್ಕೆ ಮುನ್ನ ಸಲಹೆ ಕೇಳಿಲ್ಲ: ಸಿಎಂ ಅಸಮಾಧಾನ

ವಾಜುಭಾಯಿ ವಾಲಾ ನೇಮಕಕ್ಕೆ ಮುನ್ನ ಸಲಹೆ ಕೇಳಿಲ್ಲ: ಸಿಎಂ ಅಸಮಾಧಾನ
ಬೆಂಗಳೂರು , ಭಾನುವಾರ, 31 ಆಗಸ್ಟ್ 2014 (14:14 IST)
ಹೊಸ ರಾಜ್ಯಪಾಲರ ನೇಮಕಕ್ಕೆ ಸ್ವಾಗತವಿದೆ. ಯಾರೇ ನೇಮಕ ಮಾಡಿದರೂ ಸಂವಿಧಾನ ರೀತ್ಯ ಕೆಲಸ ಮಾಡುತ್ತಾರೆ. ಆದರೆ ಕೇಂದ್ರ ಸರ್ಕಾರದ ಕ್ರಮ ತಮಗೆ ಬೇಸರ ತಂದಿದೆ. ರಾಜ್ಯಪಾಲರನ್ನು ನೇಮಕ ಮಾಡುವ ಮುನ್ನ ರಾಜ್ಯಸರ್ಕಾರದ ಸಲಹೆ ಕೇಳುವುದು ಸಂಪ್ರದಾಯವಾಗಿತ್ತು.

ರಾಜ್ಯಸರ್ಕಾರದ ಸಲಹೆ ಆಧರಿಸಿ ರಾಜ್ಯಪಾಲರನ್ನು ನೇಮಿಸಲಾಗುತ್ತದೆ. ಆದರೆ ವಾಜುಭಾಯಿ ನೇಮಕ ಮುನ್ನ ಸರ್ಕಾರವನ್ನು ಸಂಪರ್ಕಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.ಪ್ರಧಾನಿ ಮೋದಿ ಈ ಬಗ್ಗೆ ತಮ್ಮ ಜೊತೆ ಚರ್ಚಿಸಿಲ್ಲ.

ಅವರ  ನಡೆ ತಮಗೆ ಬೇಸರ ತಂದಿದೆ ಎಂದೂ ಸಿದ್ದರಾಮಯ್ಯ ಹೇಳಿದರು. ಸೌಜನ್ಯಕ್ಕಾದರೂ ಮೋದಿ ನಮ್ಮ ಜೊತೆ ಚರ್ಚಿಸಬೇಕಿತ್ತು ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು. 

Share this Story:

Follow Webdunia kannada