Webdunia - Bharat's app for daily news and videos

Install App

ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಸಿಎಂ ಯಿಂದ ಬಿಬಿಎಂಪಿಗೆ ಖಡಕ್ ಆದೇಶ

Webdunia
ಶನಿವಾರ, 3 ಸೆಪ್ಟಂಬರ್ 2022 (19:37 IST)
ಕಳೆದ 2 ದಿನಗಳ ಹಿಂದೆ ಸಿಎಂ ಮಹದೇವಪುರ ಭೇಟಿ ವೇಳೆ ರಾಜಕಾಲುವೆ ನೀರು ಉಕ್ಕಿ, ರಸ್ತೆಗಳು ಮೋರಿ‌ ನೀರಿನಿಂದ ಜಲಾವೃತವಾಗಿದ್ದವು.ಇದರಿಂದಾಗಿ ಸ್ಥಳೀಯ ಸಾರ್ವಜನಿಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
 
ಸಿಎಂ ಬೊಮ್ಮಾಯಿ ಕೂಡ ಜನರ ಆಕ್ರೋಶಕ್ಕೆ ಬೆದರಿ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಖಡಕ್ ಸಂದೇಶ ರವಾನಿಸಿದ್ರು.ಸಿಎಂ ಅದೇಶ ಬೆನ್ನೇಲೆ ಬಿಬಿಎಂಪಿ ಆಯುಕ್ತರು ವಲಯವಾರು ಜಂಟಿ ಆಯುಕ್ತರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ .
 
ಸಿಎಂ ಆದೇಶ ಬೆನ್ನೇಲೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಈಗಾಗಲೇ ಪಾಲಿಕೆಯಿಂದ ಹಲವು ಕಟ್ಟಡಗಳನ್ನು ಗುರುತು ಮಾಡಲಾಗಿದೆ .ಮಹದೇವಪುರ, ಬೊಮ್ಮನಹಳ್ಳಿ, RR ನಗರ, ಬೆಳ್ಳಂದೂರು ಪ್ರದೇಶಗಳಲ್ಲಿ ಹಲವು ರಾಜಕಾಲುವೆಗಳು ಒತ್ತುವರಿಯಾಗಿವೆ .ಕೂಡಲೇ ಒತ್ತುವರಿ ತೆರವು ಮಾಡಲು ಸ್ಥಳೀಯ ಜಂಟಿ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ .ಮುಂದಿನ ದಿಗಳಲ್ಲಿ ಒತ್ತುವರಿ ತೆರವು ಮಾಡ್ತೇವೆಂಬುದಾಗಿ ಹೇಳಿದ್ದಾರೆ.
 
ಕೆಲವು ಕಡೆ ದೊಡ್ಡ ಗಾತ್ರದ ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಚಿಕ್ಕದಾಗಿ ಮಾಡಿದ್ದಾರೆ .ಅವುಗಳನ್ನು ಸಹ ತೆರವು ಮಾಡ್ತೇವೆ .ಈ ಹಿಂದೆ ಬೊಮ್ಮನಹಳ್ಳಿ, RR ನಗರ,ಮಹದೇವಪುರದಲ್ಲಿ CMC ಇದ್ದಾಗ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ, ಅವುಗಳನ್ನು ತೆರವು ಮಾಡ್ತೇವೆ‌ ಎಂದು ಹೇಳಿದ್ದಾರೆ.
 
 
 ಪಾಲಿಕೆ ವ್ಯಾಪ್ತಿಯ ವಲಯವಾರು ವತ್ತುವರಿ ವಿವರ ನೋಡುವುದಾದ್ರೆ 
 
• ಪೂರ್ವ - 110
• ಪಶ್ಚಿಮ -  59
• ದಕ್ಷಿಣ  -  20
• ಕೋರಮಂಗಲ ಕಣಿವೆ& ಯಲಹಂಕ - 96
•  ಮಹದೇವಪುರ - 175
• ಬೊಮ್ಮನಹಳ್ಳಿ - 86 
• ಆರ್.ಆರ್.ನಗರ - 9
• ದಾಸರಹಳ್ಳಿ - 126 
•  ಒಟ್ಟು = 696 ಒತ್ತುವರಿಗಳು ತೆರವಿಗೆ  ಬಾಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments